ಟಿಪ್ಪು ಸುಲ್ತಾನ್ ವಿರುದ್ಧ ಕ್ರೈಸ್ತ ಸಮುದಾಯದ ವಿರೋಧವೇಕೆ?
ಬೆಂಗಳೂರು, ನ.10: ರಾಜ್ಯ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅದರೆ, ಈ ಬಾರಿ ಕೊಡಗಿನ ಕ್ಯಾಥೋಲಿಕ್ ಸಮುದಾಯ ಕೂಡಾ ಭಾರಿ ವಿರೋಧ ವ್ಯಕ್ತಪಡಿಸುತ್ತಿದೆ.
ನವೆಂಬರ್ 10ರ ಕೊಡಗು ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಲು ಕೊಡಗಿನ ಎಲ್ಲಾ ಸಮುದಾಯಗಳು ಕೈಜೋಡಿಸುವುದೇ ಕಾರಣವಾಗಿದೆ. ಯುನೈಟೆಡ್ ಕ್ರೈಸ್ತ ಸಮಿತಿ ನವೆಂಬರ್ 06ರಿಂದಲೇ ಪ್ರತಿಭಟನೆ ಶುರು ಮಾಡಿವೆ. ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಯುಸಿಎ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಇಷ್ಟಕ್ಕೂ ಮಂಗಳೂರಿನ ಕ್ರೈಸ್ತ ಸಮುದಾಯ ಕೊಡವರಿಗೆ ಬೆಂಬಲ ಸೂಚಿಸಲು ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
1784ರಲ್ಲಿ
ಮಂಗಳೂರಿನಲ್ಲಿದ್ದ
ಮಿಲಾಗ್ರೇಸ್
ಚರ್ಚ್
ವೊಂದನ್ನು
ಟಿಪ್ಪು
ಸುಲ್ತಾನ್
ಧ್ವಂಸಗೊಳಿಸಿದ್ದ.
1680ರಲ್ಲಿ
ನಿರ್ಮಿಸಲಾಗಿದ್ದ
ಮಂಗಳೂರಿನ
ಹೆಮ್ಮೆಯ
ಸಂಕೇತವಾಗಿದ್ದ
ಚರ್ಚ್
ನಾಶವಾಗಿದ್ದು
ಕ್ರೈಸ್ತ
ಸಮುದಾಯದ
ಭಾವನೆಗೆ
ಧಕ್ಕೆ
ತಂದಿತ್ತು.
ಇದರ
ಬೆನ್ನಲ್ಲೇ
ಸುಮಾರು
50,000ಕ್ಕೂ
ಅಧಿಕ
ಕ್ಯಾಥೋಲಿಕ್ಸ್
ಗಳನ್ನು
ಬ್ರಿಟಿಷರ
ಗೂಢಾಚಾರರು
ಎಂದು
ಹೇಳಿ
ಬಂಧನ
ಮಾಡಲಾಗಿತ್ತು.
ಸುಮಾರು 4,000ಕ್ಕೂ ಅಧಿಕ ಕ್ಯಾಥೋಲಿಕ್ಸ್ ಗಳ ಮಾರಣ ಹೋಮ ನಡೆಸಿದ ಟಿಪ್ಪು ವಿರುದ್ಧ ಸಹಜವಾಗಿ ಕ್ರೈಸ್ತ ಸಮುದಾಯದಲ್ಲಿ ದ್ವೇಷ ಬೆಳೆದಿತ್ತು. ಬಂಧಿತ ಕ್ರೈಸ್ತರನ್ನು ಮಂಗಳೂರಿನಿಂದ ಮೈಸೂರಿನ ತನಕ ಕಾಲ್ನಡಿಗೆಯಲ್ಲಿ ಕರೆದೊಯ್ದ ಟಿಪ್ಪು ಒಬ್ಬ ಕ್ರೂರಿ ಎಂದು ಕ್ರೈಸ್ತರು ನಂಬಿದ್ದಾರೆ. [ಟಿಪ್ಪು ವಿರೋಧಿಸಿ ಕೊಡಗು ಬಂದ್, ಕಲ್ಲು ತೂರಾಟ]
ಟಿಪ್ಪುವಿನ ದೌರ್ಜನ್ಯಕ್ಕೆ ಬಲಿಯಾದ ಕ್ರೈಸ್ತರ ನೆನಪಲ್ಲಿ ಒಂದು ದಿನ ಶೋಕಾಚಾರಣೆ ಇಂದಿಗೂ ಜಾರಿಯಲ್ಲಿದೆ. ಹೀಗಾಗಿ ಮಂಗಳೂರಿನ ಕ್ರೈಸ್ತ ಸಮುದಾಯ ಕೂಡಾ ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ಕೊಡವರಿಗೆ ಬೆಂಬಲ ಸೂಚಿಸುತ್ತಿದೆ.
ಟಿಪ್ಪು ಒಬ್ಬ ದೇಶದ್ರೋಹಿ, ಮತಾಂಧ, ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡಿದ ಎಂಬ ಆರೋಪ ಹೊರೆಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕೊಡವರನ್ನು ಕೊಂದ ಕಾರಣಕ್ಕೆ ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿದೆ. ಟಿಪ್ಪು ಸುಲ್ತಾನ ಜಯಂತಿ ಅಚರಣೆಯನ್ನು ಬಹಿಷ್ಕರಿಸಲಾಗಿದೆ.