ಮದುವೆಗೆ ಬಟ್ಟೆ ತರಲು ಹೋದ ಕುಟುಂಬ ಅಪಘಾತಕ್ಕೆ ಬಲಿ
ಚಿಕ್ಕಮಗಳೂರು, ಏ. 21 : ಕಾರು ಮತ್ತು ಸರ್ಕಾರಿ ಬಸ್ ಮುಖಾಮಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಗೋಣಿಬೀಡು ಬಳಿ ನಡೆದಿದೆ. ಮೃತರೆಲ್ಲರೂ ಮದುವೆಗೆ ಬಟ್ಟೆ ತರಲು ಬೆಂಗಳೂರಿಗೆ ಹೋಗಿದ್ದು, ವಾಪಸ್ ಆಗುತ್ತಿದ್ದರು.
ಮೂಡಿಗೆರೆ
ತಾಲೂಕಿನ
ಗೋಣಿಬೀಡು
ಬಳಿ
ಮಂಗಳವಾರ
ಮುಂಜಾನೆ
2
ಗಂಟೆ
ಸುಮಾರಿಗೆ
ಈ
ಅಪಘಾತ
ನಡೆದಿದೆ.
ಮಂಗಳೂರಿನಿಂದ
ಬರುತ್ತಿದ್ದ
ಸರ್ಕಾರಿ
ಬಸ್,
ಬೆಂಗಳೂರಿನಿಂದ
ಚಿಕ್ಕಮಗಳೂರಿಗೆ
ತೆರಳುತ್ತಿದ್ದ
ಕಾರಿಗೆ
ಡಿಕ್ಕಿ
ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಕೃಷ್ಣಪ್ಪ (60), ಶಾರದಮ್ಮ (45), ಲಾವಣ್ಯ (26) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನ ಚಾಲಕ ಸಂದೀಪ್ಗೆ ಗಂಭೀರ ಗಾಯಗಳಾಗಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದುವೆಗೆ ಬಟ್ಟೆ ತರಲು ಹೋಗಿದ್ದರು : ಮೇ 16ರಂದು ಲಾವಣ್ಯ ವಿವಾಹ ನಿಶ್ಚಯವಾಗಿತ್ತು. ಸೋಮವಾರ ಬೆಂಗಳೂರಿಗೆ ತೆರಳಿದ್ದ ಕುಟುಂಬದವರು ಅಲ್ಲಿರುವ ಸಂಬಂಧಿಕರನ್ನು ಮದುವೆಗೆ ಆಹ್ವಾನಿಸಿ ಬಟ್ಟೆಗಳನ್ನು ಖರೀದಿಸಿ ವಾಪಸ್ ಬರುವಾಗ ಈ ಅಪಘಾತ ನಡೆದಿದೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಬಸ್ಸಿನ ಚಾಲಕ ಬಸವರಾಜುನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.