ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದ ಪತ್ರಕರ್ತರಿಗೆ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 27 : ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಟ್ಯಾಗೋರ್ ಪತ್ರಿಕಾ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದೆ.

ಶಿರಸಿಯ ಜನಮಾಧ್ಯಮ ಪತ್ರಿಕೆ ಸಂಪಾದಕರಾದ ಅಶೋಕ ಹಾಸ್ಯಗಾರ, ಕಾರವಾರದ ಹಿರಿಯ ವರದಿಗಾರ ಡೇಲಿ ಸಾಲಾರ ಪತ್ರಿಕೆಯ ಮಂಜೂರ್ ಫಹೀಂ ಹಾಗೂ ಟಿವಿ9 ಜಿಲ್ಲಾ ವರದಿಗಾರ ಸಂದೀಪ ಸಾಗರ್ ಅವರಿಗೆ ಈ ವರ್ಷದ ಪ್ರಶಸ್ತಿ ಲಭಿಸಿದೆ.

ಆಳ್ವಾಸ್ ಕಾಲೇಜ್ ನ ಶ್ರೀಗೌರಿ ಜೋಶಿಗೆ ಯುವ ಚೇತನಾ ಪ್ರಶಸ್ತಿಆಳ್ವಾಸ್ ಕಾಲೇಜ್ ನ ಶ್ರೀಗೌರಿ ಜೋಶಿಗೆ ಯುವ ಚೇತನಾ ಪ್ರಶಸ್ತಿ

ಸಂಘದ ಅಧ್ಯಕ್ಷರಾದ ಟಿಬಿ ಹರಿಕಾಂತ ಅಧ್ಯಕ್ಷತೆಯ ಸುಭಾಷ್ ದೂಪದಹೊಂಡ, ಶೇಷಗಿರಿ ಮುಂಡಳ್ಳಿ, ನವೀನ್ ಸಾಗರ್, ಹಿರಿಯ ವರದಿಗಾರರಾದ ರಾಮಾ ನಾಯ್ಕ, ವಸಂತಕುಮಾರ ಕತಗಾಲ, ಸಂತೋಷ ನಾಯ್ಕ ಸದಸ್ಯರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯು ಈ ಮೂವರ ಹೆಸರನ್ನ ಘೋಷಿಸಿದೆ.

Three journalists selected for Tagore media award in Karwar

ಜುಲೈ 1ರಂದು ಗುರುವಾರ ನಗರದ ರಬಿಯಾ ಹಾಲ್ ನಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಜಲಪಾತಗಳ ಜಿಲ್ಲೆ ಉತ್ತರ ಕನ್ನಡಕ್ಕೆ ಜೀವರಕ್ಷಕರ ಸಾಥ್ಜಲಪಾತಗಳ ಜಿಲ್ಲೆ ಉತ್ತರ ಕನ್ನಡಕ್ಕೆ ಜೀವರಕ್ಷಕರ ಸಾಥ್

ಅಶೋಕ ಹಾಸ್ಯಗಾರ : ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡ ಅಶೋಕ ಹಾಸ್ಯಗಾರ, ಅತ್ಯುತ್ತಮ ಪೋಟೋಗ್ರಾಫರ್ ಆಗಿದ್ದಾರೆ. ತಮ್ಮ ಪತ್ರಿಕೋದ್ಯಮ ಜೊತೆಗೆ ಕವಿಗಳಾಗಿ, ಸಾಹಿತಿ, ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಕಾಲ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡಿದ ಇವರು, ಸದ್ಯ ಶಿರಸಿಯ ಜನಮಾಧ್ಯಮ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪತ್ರಿಕೋದ್ಯಮದ ಬಗ್ಗೆ ಕುತೂಹಲವಿದ್ದರೆ ಇದನ್ನು ಓದಿ!ಪತ್ರಿಕೋದ್ಯಮದ ಬಗ್ಗೆ ಕುತೂಹಲವಿದ್ದರೆ ಇದನ್ನು ಓದಿ!

ಮಂಜೂರ್ ಫಹೀಂ : ಹಿರಿಯ ವರದಿಗಾರರಾದ ಮಂಜೂರ್ ಫಹೀಂ ಮೊದಲು ಪ್ರೌಢಶಾಲೆಯ ಉತ್ತಮ ಶಿಕ್ಷಕರಾಗಿ ಜನಪ್ರಿಯರಾದವರು. ಕಳೆದ ನಾಲ್ಕು ದಶಕಗಳಿಂದ ಡೇಲಿ ಸಾಲಾರ ಉರ್ದು ಪತ್ರಿಕೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನೇಹ ಜೀವಿಯಾದ ಇವರು, ಕೋಮು ಸೌಹಾರ್ದ ಹಾಗೂ ಭಾಷಾ ಸೌಹಾರ್ದಕ್ಕಾಗಿ ಸದಾ ಹಂಬಲಿಸುತ್ತಿರುವವರು. ಪತ್ರಿಕೋದ್ಯಮದ ಜೊತೆಗೆ ಉರ್ದು ಕವಿಯಾಗಿ ಚಿರಪರಿಚಿತರಾಗಿದ್ದಾರೆ.

ಸಂದೀಪ ಸಾಗರ್ : ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಸಂದೀಪ ಸಾಗರ್ ಕಳೆದ ಐದು ವರ್ಷಗಳಿಂದ ಟಿವಿ9 ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವ ಉತ್ಸಾಹಿ ಪತ್ರಕರ್ತರಾದ ಇವರು ಜಿಲ್ಲೆಯ ಜನರೊಂದಿಗೆ ಪ್ರೀತಿ ಸ್ನೇಹದಿಂದ ಬೆರೆತು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವವರಾಗಿದ್ದಾರೆ. ಸಮಾನತೆಯ ಕನಸುಗಾರರಾಗಿದ್ದಾರೆ.

English summary
Three journalists Ashok Hasyagar, Manjur Phahim and Sandip Sagar have been selected for Tagore media award by Karwar working jourlists' association. The award will be presented on July 1st on National Press Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X