ನೆಲಮಂಗಲ ಬಸ್ ಬೆಂಕಿಯಲ್ಲಿ ಗಾಯಗೊಂಡಿದ್ದ ಮಮತಾ ಸಾವು
ನಿಧನರಾಗುವ ಮುನ್ನ ತಮ್ಮ ಪರಿತ್ಯಕ್ತ ಪತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮಮತಾ. ಸೋಮವಾರ ತಡರಾತ್ರಿ ನಡೆದಿದ್ದ
ಬೆಂಗಳೂರು, ಫೆಬ್ರವರಿ 24: ನೆಲಮಂಗಲದಲ್ಲಿ ಇತ್ತೀಚೆಗೆ ಸಂಭವಿಸಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಕೆಂಗೇರಿಯ ನಿವಾಸಿ ಮಮತಾ ಅವರು ಶುಕ್ರವಾರ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಸೋಮವಾರ (ಫೆ. 20) ತಡರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಬೆಂಗಳೂರಿನ ಪೀಣ್ಯದ ಮಹಿಳೆಯೊಬ್ಬರು ಭಾಗ್ಯಮ್ಮ ಎಂಬುವರು ನಿಧನರಾಗಿದ್ದರಲ್ಲದೆ, 10 ಜನರು ಗಾಯಗೊಂಡಿದ್ದರು. ಅವರಲ್ಲಿ ಮಮತಾ ಕೂಡ ಒಬ್ಬರು. ಆದರೆ, ಅವರ ಸ್ಥಿತಿ ಗಂಭೀರವಾಗಿತ್ತು.[ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ]
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಮತಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ಅವರು ಶುಕ್ರವಾರ ಅಸುನೀಗಿದ್ದಾರೆ.[ನೆಲಮಂಗಲ ಬಸ್ ಅಗ್ನಿ ದುರಂತಕ್ಕೆ ಪೂಜಾ ಸಾಮಗ್ರಿಯೇ ಕಾರಣ]
ಆರು ತಿಂಗಳ ಹಿಂದೆ ಪತಿಯಿಂದ ಪರಿತ್ಯಕ್ತರಾಗಿದ್ದ ಮಮತಾ ತಮ್ಮ ಮಗನೊಟ್ಟಿಗೆ ಜೀವನ ಸಾಗಿಸುತ್ತಿದ್ದರು. ಆದರೆ, ಬಸ್ ದುರಂತದಲ್ಲಾದ ಸುಟ್ಟ ಗಾಯಗಳಿಂದ ಅವರು ನಿಧನರಾಗಿದ್ದಾರೆ. ಆದರೆ, ಸಾಯುವುದಕ್ಕೂ ಮುನ್ನ ಕೆಲವೇ ನಿಮಿಷಗಳ ಹಿಂದೆ ತಮ್ಮ ಪತಿ ಸುರೇಶ್ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದರು.