ಮೇಕೆದಾಟು ವಿರುದ್ಧ ಸುಪ್ರೀಂಗೆ ತಮಿಳುನಾಡು ಮೊರೆ
ಬೆಂಗಳೂರು, ನ.19 : ಕಾವೇರಿ ಕೊಳ್ಳದ ಮೇಕೆದಾಟು ಬಳಿ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ತಮಿಳುನಾಡು ಅಪಸ್ವರ ಎತ್ತಿದ್ದು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಮೇಕೆದಾಟು ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಯೋಜನೆ ಜಾರಿಗೊಳಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ
ತಮಿಳುನಾಡು
ಸರ್ಕಾರ
ಸುಪ್ರೀಂಕೋರ್ಟ್ಗೆ
ಮೇಕೆದಾಟು
ಯೋಜನೆ
ವಿರುದ್ಧ
ಅರ್ಜಿ
ಸಲ್ಲಿಸಿದೆ.
ಕುಡಿಯುವ
ನೀರಿಗಾಗಿ
ಮಾತ್ರ
ಈ
ಯೋಜನೆ
ಕೈಗೆತ್ತಿಕೊಳ್ಳಲಾಗುತ್ತಿದೆ.
ಕೇಂದ್ರ
ಸರ್ಕಾರದ
ಅನುಮತಿ
ಸಿಕ್ಕಿದೆ.
ಈ
ವಿಷಯದಲ್ಲಿ
ತಕರಾರು
ತೆಗೆಯಲು
ತಮಿಳುನಾಡಿಗೆ
ಯಾವುದೇ
ಹಕ್ಕಿಲ್ಲ
ಎಂದು
ಎಂ.ಬಿ
ಪಾಟೀಲ್
ತಿಳಿಸಿದ್ದಾರೆ.
ಮಳೆ ಚೆನ್ನಾಗಿ ಬಂದಾಗ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ. ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಈ ಯೋಜನೆ ಪ್ರಶ್ನಿಸುವ ಹಕ್ಕು ತಮಿಳುನಾಡಿಗೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. [ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ]
25 ಪುಟಗಳ ಅರ್ಜಿ ಸಲ್ಲಿಕೆ : ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡವಾಗಿ ಜಲಾಶಯ ನಿರ್ಮಿಸದಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ 25 ಪುಟಗಳ ರಿಟ್ ಅರ್ಜಿಯನ್ನು ಸಲ್ಲಿಸಿದೆ. [ಮೇಕೆದಾಟು ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ]
ಕಾವೇರಿ ನ್ಯಾಯಾಧೀಕರಣದ ಅಂತಿಮ ವರದಿಯಲ್ಲಿ ಪರಿಗಣಿಸಿಲ್ಲದಿರುವ ಮತ್ತು ಅನುಮತಿ ನೀಡದಿರುವ ಯಾವುದೇ ಯೋಜನೆಯನ್ನು ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸದಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕೆಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.
ಕಾನೂನು ಹೋರಾಟ ನಡೆಸಲು ಸಿದ್ಧ : ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಲ್ಲಿ ರಾಜ್ಯದ ನೀರಿನ ಪಾಲು ನಿಗದಿಯಾಗಿದೆ. ಅದರಂತೆ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಜಲಾಶಯ ನಿರ್ಮಿಸುತ್ತಿದ್ದೇವೆ, ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಕಾನೂ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.