ಸಂಧಾನ ವಿಫಲ, ಜುಲೈ 25ರಿಂದ ಸಾರಿಗೆ ನೌಕರರ ಮುಷ್ಕರ
ಬೆಂಗಳೂರು, ಜುಲೈ 22 : ಸಾರಿಗೆ ಸಂಸ್ಥೆಗಳ ನೌಕರರು ಮತ್ತು ಸರ್ಕಾರದ ನಡುವಿನ ಮಾತುಕತೆ ಮುರಿದುಬಿದ್ದಿದೆ. ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿರುವ ನೌಕರರು ಜುಲೈ 25ರ ಮಧ್ಯರಾತ್ರಿಯಿಂದ ಮುಷ್ಕರ ನಡೆಸಲಿದ್ದಾರೆ.
ಶುಕ್ರವಾರ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಕೆಎಸ್ಆರ್ಟಿಸಿ
ವರ್ಕರ್ಸ್
ಫೇಡರೇಷನ್
ಪ್ರಧಾನ
ಕಾರ್ಯದರ್ಶಿ
ಅನಂತ
ಸುಬ್ಬರಾವ್
ಅವರ
ಜೊತೆ
ನಡೆಸಿದ
ಸಂಧಾನ
ಸಭೆ
ಮುರಿದುಬಿದ್ದಿದೆ.
ಆದ್ದರಿಂದ
ಜುಲೈ
25ರಿಂದ
ಮುಷ್ಕರ
ನಡೆಸಲಾಗುತ್ತದೆ.[ಸಾರಿಗೆ
ಸಂಸ್ಥೆ
ನೌಕರರಿಗೆ
ಶೇ
8ರಷ್ಟು
ವೇತನ
ಹೆಚ್ಚಳ]
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ವೇತನ ಪರಿಷ್ಕರಣೆ ಬಗ್ಗೆ ಸರ್ಕಾರದ ಏಕಪಕ್ಷೀಯ ನಿರ್ಧಾರ ಖಂಡಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.[ಜುಲೈ 25ರಿಂದ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ]
ಇಂದು
ನಡೆದ
ಸಭೆಯಲ್ಲಿಯೂ
ಶೇ
30ರಷ್ಟು
ವೇತನ
ಹೆಚ್ಚಳ
ಮಾಡಬೇಕು
ಎಂಬ
ಬೇಡಿಕೆ
ಮುಂದಿಡಲಾಯಿತು.
ಆದರೆ,
ಶೇ
10ರಷ್ಟು
ವೇತನ
ಹೆಚ್ಚಿಸುವುದಾಗಿ
ಸರ್ಕಾರ
ಹೇಳಿತು.
ಆದ್ದರಿಂದ
ಸಂಧಾನ
ಸಭೆ
ಮುರಿದುಬಿದ್ದಿದ್ದು,
ಮುಷ್ಕರ
ನಡೆಸಲು
ತೀರ್ಮಾನಿಸಲಾಗಿದೆ.
2016ರ ಜನವರಿ 1ರಿಂದಲೇ ಅನ್ವಯವಾಗುವಂತೆ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರದ ನಿರ್ಧಾರದಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಎನ್ಇಕೆಆರ್ಟಿಸಿ ಸೇರಿ ಎಲ್ಲಾ ನಿಗಮಗಳ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.