ಬರ ಪರಿಹಾರ : ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು
ಬೆಂಗಳೂರು, ಸೆ. 02 : ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಮೇವು ಸರಬರಾಜು ಹಾಗೂ ಉದ್ಯೋಗ ಖಾತರಿ ಕಾಮಗಾರಿಗಳ ಅನುಷ್ಠಾನಕ್ಕೆ ಗಮನ ನೀಡಬೇಕು. ತರಬೇತಿ, ರಜೆ ಮೇಲೆ ತೆರಳಿರುವ ಅಧಿಕಾರಿಗಳನ್ನು ವಾಪಸ್ ಕರೆಸಿ ಬರಪರಿಹಾರ ಕಾರ್ಯಗಳು ತ್ವರಿತವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ
ವಿಧಾನಸೌಧದಲ್ಲಿ
ಜಿಲ್ಲಾಧಿಕಾರಿಗಳು
ಹಾಗೂ
ಜಿಲ್ಲಾ
ಪಂಚಾಯತ್
ಸಿಇಒಗಳ
ಸಭೆ
ನಡೆಯಿತು.
ಸುಮಾರು
10
ಗಂಟೆಗಳ
ಸಭೆಯ
ಬಳಿಕ
ಪತ್ರಿಕಾಗೋಷ್ಠಿ
ನಡೆಸಿದ
ಸಿದ್ದರಾಮಯ್ಯ
ಅವರು
ಸಭೆಯ
ವಿವರಗಳನ್ನು
ಮಾಧ್ಯಮಗಳಿಗೆ
ನೀಡಿದರು.
[ಬರ
ಪರಿಸ್ಥಿತಿ
:
ವಿದ್ಯುತ್
ಸಮಸ್ಯೆ,
ಪವರ್
ಕಟ್]
'ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 10 ರೊಳಗೆ ಪ್ರತಿ ಜಿಲ್ಲೆಯೂ ಪ್ರತ್ಯೇಕ ಕ್ರಿಯಾ ಯೋಜನೆಯನ್ನು ರೂಪಿಸಿ, ಅದರ ಅನುಷ್ಠಾನಕ್ಕೆ ಮುನ್ನ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಬೇಕು' ಎಂದು ಸೂಚಿಸಲಾಗಿದೆ ಎಂದು ಹೇಳಿದರು. [ಕೈಕೊಟ್ಟ ಮುಂಗಾರು, ತುಂಬಿಲ್ಲ ಡ್ಯಾಂ]
'ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಮೇವು ಸರಬರಾಜು ಹಾಗೂ ಉದ್ಯೋಗ ಖಾತರಿ ಕಾಮಗಾರಿಗಳ ಅನುಷ್ಠಾನಕ್ಕೆ ಗಮನಹರಿಸಬೇಕು. ಪ್ರತಿ ಜಿಲ್ಲೆಯಲ್ಲೂ ರಚಿಸಲಾಗಿರುವ ಕಾರ್ಯಪಡೆಗಳು ಜಿಲ್ಲೆಯಲ್ಲಿ ಲಭ್ಯವಿರುವ ಅನುದಾನ ಹಾಗೂ ಜಿಲ್ಲೆಗೆ ಅವಶ್ಯಕವಿರುವ ಅನುದಾನದ ಬೇಡಿಕೆ ಕುರಿತು ಸರ್ಕಾರಕ್ಕೆ ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ' ಎಂದರು.
'ತರಬೇತಿ,
ರಜೆ
ಮೇಲೆ
ತೆರಳಿರುವ
ಅಧಿಕಾರಿಗಳನ್ನು
ವಾಪಸ್
ಕರೆಸಿಕೊಂಡು
ಬರ
ಪರಿಹಾರ
ಕಾರ್ಯಗಳು
ತ್ವರಿತವಾಗಿ
ನಡೆಯುವಂತೆ
ಕ್ರಮ
ಕೈಗೊಳ್ಳಬೇಕು.
ಬರ
ಪರಿಹಾರ
ಕಾರ್ಯದಲ್ಲಿ
ಅಧಿಕಾರಿಗಳು
ನಿರ್ಲಕ್ಷ್ಯ
ತೋರಿದರೆ
ಜಿಲ್ಲಾ
ಪಂಚಾಯತ್ನ
ಸಿಇಒಗಳೇ
ಹೊಣೆಯಾಗುತ್ತಾರೆ'
ಎಂದು
ಮುಖ್ಯಮಂತ್ರಿಗಳು
ಎಚ್ಚರಿಕೆ
ನೀಡಿದರು.
ಮೇವು ಸಾಗಣೆ ನಿಷೇಧ : 'ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ, ರಾಜ್ಯದಿಂದ ಹೊರ ರಾಜ್ಯಗಳಿಗೆ ಮೇವು ಸಾಗಣೆ ಮತ್ತು ಮೇವು ಮಾರಾಟವನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ' ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಸೂಚಿಸಿದರು.
'ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಭೇಟಿನೀಡಿದಾಗ ಸಾಂತ್ವನ ಹೇಳುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಶಾಸಕರು ಯಾವುದೇ ಭರವಸೆಗಳನ್ನು ನೀಡಿದ್ದರೆ, ಅದನ್ನು ತಕ್ಷಣ ಈಡೇರಿಸಲು ಕ್ರಮ ಕೈಗೊಳ್ಳಬೇಕು' ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.