ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾಮೀನು ಸಿಕ್ಕರೂ ಶ್ಯೂರಿಟಿ ಸಿಗಲಿಲ್ಲ, ಜಯಚಂದ್ರ ಅಂದರ್
ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಸಿ ಜಯಚಂದ್ರ ಅವರಿಗೆ ನಗರದ ಸಿಟಿ ಸಿವಿಲ್ ಕೋರ್ಟಿನಿಂದ ಗುರುವಾರ ಮಧ್ಯಂತರ ಜಾಮೀನು ಮಂಜೂರಾಗಾಗಿದೆ.
ಬೆಂಗಳೂರು, ಡಿಸೆಂಬರ್ 15: ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಸಿ ಜಯಚಂದ್ರ ಅವರಿಗೆ ನಗರದ ಸಿಟಿ ಸಿವಿಲ್ ಕೋರ್ಟಿನಿಂದ ಗುರುವಾರ ಮಧ್ಯಂತರ ಜಾಮೀನು ಮಂಜೂರಾಗಾಗಿದೆ.
ಆದರೆ, ಜಾಮೀನು ಸಿಕ್ಕರೂ 5 ಲಕ್ಷ ರು ಬೆಲೆಯ ಶ್ಯೂರಿಟಿ ಮೊತ್ತ ಪಾವತಿಸಲು ವಿಳಂಬವಾದ ಕಾರಣ, ಜಯಚಂದ್ರರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಯಿತು. ನಾಳೆ ವಿಚಾರಣೆ ನಡೆಯಲಿದ್ದು, ಆರೋಪಿಯನ್ನು ತಮ್ಮ ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಎಸಿಬಿ ಕಾದಿದ್ದಾರೆ.
ಇಡಿ, ಸಿಬಿಐಯಿಂದ ವಿಚಾರಣೆಗೊಳಲ್ಪಟ್ಟಿದ್ದ ಜಯಚಂದ್ರ ಅವರ ಮನೆ ಹಾಗೂ ಕಚೇರಿಯಲ್ಲಿ ಅಪಾರ ಪ್ರಮಾಣದ ನಗದು ಹಾಗೂ ಚಿನ್ನದ ಗಟ್ಟಿ ಪತ್ತೆಯಾಗಿತ್ತು.
152ಕೋಟಿ ರು ಗೂ ಅಧಿಕ ಅಕ್ರಮ ಆಸ್ತಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಚಂದ್ರ ಸೇರಿದಂತೆ ಅನೇಕ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖೆಗೊಳಪಡಿಸಿತ್ತು. ಜಯಚಂದ್ರ ಅವರಿಗೆ ಸಾಕ್ಷಿನಾಶಪಡಿಸದಂತೆ ಸೂಚಿಸಿ, ಶ್ಯೂರಿಟಿ ಪಡೆದು ಷರತ್ತುಬದ್ಧ ಜಾಮೀನು ನೀಡಲಾಗಿದೆ.
Comments
income tax bengaluru corruption black money currency it raid siddaramaiah ಆದಾಯ ತೆರಿಗೆ ಹಣ ದಾಳಿ ಕಪ್ಪುಹಣ
English summary
S.C. Jayachandra, Chief Project Officer, State Highway Development Project (SHDP) gets interim bail in Illegal asset case. A city civil court in Bengaluru today granted conditional bail to Jayachandra.