ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಇಲ್ಲಿ ಸಹಿ ಹಾಕಿ
ಬೆಂಗಳೂರು, ನವೆಂಬರ್ 26 : ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾಯಕರ ಹುಡುಕಾಟ ಆರಂಭವಾಗಿದೆ. ಡಿಸೆಂಬರ್ ವೇಳೆಗೆ ನೂತನ ಅಧ್ಯಕ್ಷರ ಆಯ್ಕೆಯಾಗಬೇಕಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಆನ್ಲೈನ್ನಲ್ಲಿ ಅಭಿಯಾನ ಆರಂಭವಾಗಿದೆ.
ಪ್ರಸ್ತುತ
ಬಿಜೆಪಿ
ಅಧ್ಯಕ್ಷರಾಗಿರುವ
ಪ್ರಹ್ಲಾದ್
ಜೋಶಿ
ಅವರ
ಅಧಿಕಾರಾವಧಿ
ಮಕ್ತಾಯಗೊಳ್ಳುತ್ತಿದ್ದು,
ಡಿಸೆಂಬರ್ನಲ್ಲಿ
ನೂತನ
ಅಧ್ಯಕ್ಷರ
ಆಯ್ಕೆ
ನಡೆಯಲಿದೆ
ಎಂದು
ಈಗಾಗಲೇ
ಪಕ್ಷ
ಪ್ರಕಟಿಸಿದೆ.
ಇದಕ್ಕೆ
ಪೂರಕವಾಗಿ
ಆನ್ಲೈನ್ನಲ್ಲಿ
ಸಹಿ
ಸಂಗ್ರಹ
ಅಭಿಯಾನ
ಆರಂಭಿಸಲಾಗಿದೆ.
[ಕರ್ನಾಟಕ
ಬಿಜೆಪಿಗೆ
ನೂತನ
ಸಾರಥಿ
ಯಾರು?]
BSY-BRIGADE ಈ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುವುದು ಇದರ ಉದ್ದೇಶವಾಗಿದೆ. [ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು]
ಇದುವರೆಗೂ 507 ಜನರು ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು ಎಂದು ತಮ್ಮ ಸಹಿ ಹಾಕಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. 1000 ಸಹಿಗಳು ಬೇಕು ಎಂದು ಬಿಎಸ್ವೈ ಬ್ರಿಗೇಡ್ ಮನವಿ ಮಾಡಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪ ಅವರದ್ದಾಗಿದೆ. ಮುಖ್ಯಮಂತ್ರಿಯಾಗಿದ್ದ ವೇಳೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಅವರು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಬೇಕು ಎಂದು ಅಭಿಯಾನದ ಪುಟದಲ್ಲಿ ಮಾಹಿತಿ ನೀಡಲಾಗಿದೆ.
ಅಭಿಯಾನಕ್ಕೆ ಬೆಂಬಲ ನೀಡಲು ಸಹಿ ಮಾಡಿ