ಹಾಸನ : ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಬಸ್ ವ್ಯವಸ್ಥೆ
ಹಾಸನ, ಜ.30 : ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಸಂಜೆ ಸಮ್ಮೇಳಾನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಕೆಎಸ್ಆರ್ಟಿಸಿ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ.
ಫೆ.1ರಿಂದ
ಮೂರು
ದಿನಗಳ
ಕಾಲ
ಹಾಸನ
ಜಿಲ್ಲೆಯ
ಶ್ರವಣಬೆಳಗೊಳದಲ್ಲಿ
81ನೇ
ಕನ್ನಡ
ಸಾಹಿತ್ಯ
ಸಮ್ಮೇಳನ
ನಡೆಯಲಿದೆ.
ಸಾಹಿತ್ಯ
ಸಮ್ಮೇಳನಕ್ಕೆ
ಆಗಮಿಸುವ
ಸಾಹಿತ್ಯಾಸಕ್ತರಿಗೆ
ಜನವರಿ
31
ರಿಂದ
ಚನ್ನರಾಯಪಟ್ಟಣದಿಂದ
ಶ್ರವಣಬೆಳಗೊಳಕ್ಕೆ
ಪ್ರತೀ
2
ನಿಮಿಷಕ್ಕೆ
ಒಂದರಂತೆ
ಬಸ್ಸುಗಳನ್ನು
ಓಡಿಸಲಾಗುತ್ತಿದೆ.
*
ಹಾಸನದ
ಎಲ್ಲಾ
ತಾಲೂಕು
ಕೇಂದ್ರಗಳಿಂದ
ಬೆಳಗ್ಗೆ
7.30ಕ್ಕೆ
ಹಾಗೂ
9.30ಕ್ಕೆ
ಸಮ್ಮೇಳನಕ್ಕೆ
ಆಗಮಿಸಲು
ಬಸ್ಸುಗಳ
ವ್ಯವಸ್ಥೆ
ಮಾಡಲಾಗಿದೆ.
*
ರಾಜ್ಯದ
ಎಲ್ಲಾ
ಜಿಲ್ಲಾ
ಕೇಂದ್ರಗಳಿಂದ
ಸಮ್ಮೇಳನಕ್ಕಾಗಿ
ಒಂದೊಂದು
ಬಸ್
ವ್ಯವಸ್ಥೆಯನ್ನು
ಮಾಡಲಾಗಿದೆ.
[ಅಧ್ಯಕ್ಷರ
ಮೆರವಣಿಗೆಗೆ
ಎತ್ತಿನ
ಗಾಡಿ
ಸಿದ್ಧ]
*
ಶ್ರವಣಬೆಳಗೊಳದಿಂದ
ಚನ್ನರಾಯಪಟ್ಟಣಕ್ಕೆ
ಬೆಳಗ್ಗೆ
6
ಗಂಟೆಯಿಂದ
ರಾತ್ರಿ
11ಗಂಟೆಯವರೆಗೆ
ಹೋಗಿ
ಬರಲು
ಬಸ್ಸುಗಳಿವೆ.
*
ಪ್ರತಿನಿಧಿಗಳ
ವಸತಿ
ಗೃಹಗಳಿಗೆ
ಅವರನ್ನು
ತಲುಪಿಸಲು
118
ಬಸ್ಸುಗಳನ್ನು
ನಿಯೋಜಿಸಲಾಗಿದೆ.
[ಸಾಹಿತ್ಯ
ಸಮ್ಮೇಳನದಲ್ಲಿ
ಒಂದೇ
ನಿರ್ಣಯ!]
*
ದೂರ
ಸ್ಥಳಗಳಿಂದ
ಆಗಮಿಸುವ
ಸಾಹಿತ್ಯಾಸಕ್ತರಿಗೆ
ಹತ್ತಿರದ
ಪ್ರೇಕ್ಷಣೀಯ
ಸ್ಥಳಗಳನ್ನು
ನೋಡಲು
ಅನುಕೂಲವಾಗುವಂತೆ
ಒಂದು
ದಿನದ
ಪ್ರವಾಸಿ
ಪ್ಯಾಕೇಜ್
ಮಾಡಲಾಗಿದೆ.
ಕೆಎಸ್ಆರ್ಟಿಸಿ
ಮತ್ತು
ಪ್ರವಾಸೋಧ್ಯಮ
ಇಲಾಖೆ
ಸಹಯೋಗದಲ್ಲಿ
ಪ್ಯಾಕೇಜ್
ಸಿದ್ಧಪಡಿಸಲಾಗಿದೆ.
ಮಾರ್ಗಗಳು:
1)
ಶ್ರವಣಬೆಳಗೊಳ-ಹಳೇಬೀಡು-ಬೇಲೂರು-ಹಲ್ಮಿಡಿ
2)
ಶ್ರವಣಬೆಳಗೊಳ-ಶ್ರೀರಂಗಪಟ್ಟಣ-ಮೈಸೂರು-ಕೆಆರ್ಎಸ್
* ಶ್ರವಣಬೆಳಗೊಳದಲ್ಲಿ ಆಟೋಗಳು ಮತ್ತು ಟ್ಯಾಕ್ಸಿಗಳಿಗೆ ನಿಗದಿತ ದರವನ್ನು ಮಾತ್ರ ಪಡೆಯುವಂತೆ ಚಾಲಕರಿಗೆ ಸೂಚಿಸಲಾಗಿದೆ. ಈ ಕುರಿತು ಸ್ವಯಂ ಸೇವಕರು ಮತ್ತು ಪೋಲೀಸರು ಸ್ಥಳದಲ್ಲಿಯೇ ಮಾಹಿತಿ ನೀಡಲಿದ್ದಾರೆ.