ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನ್ಯಾ.ಭಾಸ್ಕರರಾವ್ಗೆ ಸಂಕಷ್ಟ
ಬೆಂಗಳೂರು, ಜುಲೈ 13 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ. ಭಾಸ್ಕರರಾವ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದು, ಪುತ್ರನ ಬಂಧನವಾದ ಬಳಿಕ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕರ್ನಾಟಕ
ಲೋಕಾಯುಕ್ತದಲ್ಲಿ
ನಡೆದ
ಭ್ರಷ್ಟಾಚಾರ
ಪ್ರಕರಣದ
ತನಿಖೆಯನ್ನು
ಎಸ್ಐಟಿ
ನಡೆಸುತ್ತಿದೆ.
ಎಸ್ಐಟಿ
ಮುಖ್ಯಸ್ಥ
ಕಮಲ್
ಪಂತ್
ಅವರು,
ಫೆಬ್ರವರಿ
ತಿಂಗಳಿನಲ್ಲಿ
ಸರ್ಕಾರಕ್ಕೆ
ಪತ್ರ
ಬರೆದು
ನ್ಯಾ.ಭಾಸ್ಕರರಾವ್
ಅವರ
ವಿರುದ್ಧ
ಕ್ರಮ
ಕೈಗೊಳ್ಳಲು
ಅನುಮತಿ
ಕೇಳಿದ್ದರು.
[ಭಾಸ್ಕರರಾವ್
ವಿರುದ್ಧದ
ತನಿಖೆಗೆ
ರಾಜ್ಯಪಾಲರ
ಒಪ್ಪಿಗೆ
ಬೇಕು]
ಸರ್ಕಾರ ಈ ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಕಳುಹಿಸಿಕೊಟ್ಟಿತ್ತು. ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 197ರ ಅಡಿ ಭಾಸ್ಕರರಾವ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. [ಲೋಕಾಯುಕ್ತದಲ್ಲಿ ಏನಿದು ಹಗರಣ?]
ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡುತ್ತಿದ್ದರು ಎಂಬುದು ಆರೋಪವಾಗಿದೆ. ಈ ಬಗ್ಗೆ ಭಾಸ್ಕರರಾವ್ ಅವರಿಗೆ ತಿಳಿದಿದ್ದರೂ ಪುತ್ರನ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಬೆದರಿಕೆ ಹಾಕಲು ಲೋಕಾಯುಕ್ತ ಕಚೇರಿ ದೂರವಾಣಿಯನ್ನು ಬಳಸಿಕೊಂಡಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. [ಭಾಸ್ಕರರಾವ್ ರಾಜೀನಾಮೆ]
ಯಾವ ಆರೋಪಗಳು : ಕಾನೂನಿನ ಅನ್ವಯ ಭಾಸ್ಕರಾವ್ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಲು ರಾಜ್ಯಪಾಲರು ಒಪ್ಪಿಗೆ ನೀಡಬೇಕಾಗಿತ್ತು. ಆದ್ದರಿಂದ ಕಡತಗಳನ್ನು ರಾಜಭವನಕ್ಕೆ ರವಾನಿಸಲಾಗಿತ್ತು. ಈಗ ರಾಜ್ಯಪಾಲ ವಜುಭಾಯಿ ವಾಲಾ ಒಪ್ಪಿಗೆ ನೀಡಿರುವುದರಿಂದ ಭಾಸ್ಕರರಾವ್ ಅವರಿಗೆ ಸಂಕಷ್ಟ ಎದುರಾಗಲಿದೆ.
ಭ್ರಷ್ಟಾಚಾರ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಐಪಿಸಿ ಸೆಕ್ಷನ್ 202 (ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದಿರುವುದು), 217 (ಅಪರಾಧವನ್ನು ಉದ್ದೇಶಪೂರ್ವಕ ಮರೆಮಾಚುವುದು) ರ ಅನ್ವಯ ಭಾಸ್ಕರರಾವ್ ಅವರ ವಿರುದ್ಧ ಪ್ರಕರಣ ದಾಖಲು ಮಾಡುವ ಸಾಧ್ಯತೆ ಇದೆ.