ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಯಚೂರು: ತುಂಗಭದ್ರಾ ಜಲಾಶಯದ ಹೂಳೆತ್ತಲು ನಿಧಿ ಸಂಗ್ರಹ
ರಾಯಚೂರು, ಮೇ 25 : ಹೊಸಪೇಟೆಯಲ್ಲಿನ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳೆತ್ತಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದನ್ನು ರೈತ ಸಂಘ ಸವಾಲಾಗಿ ಸ್ವೀಕರಿಸಿದೆ.
ಇದಕ್ಕೆ ಹಲವು ಸಂಘ, ಸಂಸ್ಥೆಗಳು ಸಹ ಸಾಥ್ ಕೊಟ್ಟಿವೆ. ಇದಕ್ಕೆ ಪೂರಕವೆಂಬಂತೆ ಸಿಂಧನೂರು ಯುವ ಸ್ನೇಹಿತರು, ರೈತ ಮುಖಂಡ ವಿರೇಶ್ ಗೌಡ ನೆಟೆಕಲ್ ಮತ್ತು ರೋಟರಿ ಕಬ್ಲ್ ಅಧ್ಯಕ್ಷ ಸುಮಿತ್ ತಡಕಲ್ ನೇತೃತ್ವದಲ್ಲಿ ನಗರದ ಕೋರ್ಟ್ ಕಚೇರಿ, ತಹಸೀಲ್ ಆಫೀಸ್ , ನಗರಸಭೆ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಹೂಳೆತ್ತಲು ಹಣ ಸಂಗ್ರಹಿಸಿದರು.
ಈಗಾಗಲೇ ಹೂಳೆತ್ತುವ ಕಾರ್ಯ ಭರದಿಂದ ಸಾಗಿದ್ದು ಹಲವು ರಾಜಕೀಯ ಮುಖಂಡರು ಹೂಳೆತ್ತಲು ದೇಣಿಗೆ ಸಹಾಯ ನೀಡುತ್ತಿದ್ದಾರೆ.
ತುಂಗಭದ್ರ ನದಿಯಲ್ಲಿ ತುಂಬಿಕೊಂಡಿರುವ ಹೂಳೆತ್ತಲು ಹಲವು ಸಂಘ-ಸಂಸ್ಥೆಗಳು ಸರ್ಕಾರ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ರೈತ ಸಂಘವೇ ಮುತ್ವರ್ಜಿ ವಹಿಸಿ ಹೂಳೆತ್ತವ ಕಾರ್ಯ ಆರಂಭಿಸಿದೆ.
Comments
English summary
Raichur district Sindhanur Youth's group collection Fund for Tungabhadra river desilting, on May 25th.
Story first published: Thursday, May 25, 2017, 16:21 [IST]