ಕಲಾಂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಬಿಎಸ್ವೈ, ಸಿದ್ದರಾಮಯ್ಯ
ಬೆಂಗಳೂರು, ಜುಲೈ 29 : ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನ
ರಾಮೇಶ್ವರಂನಲ್ಲಿ
ಗುರುವಾರ
ಬೆಳಗ್ಗೆ
ಅಬ್ದುಲ್
ಕಲಾಂ
ಅವರ
ಅಂತ್ಯಕ್ರಿಯೆ
ನಡೆಯಲಿದ್ದು,
ಇದಕ್ಕಾಗಿ
ರಾಜ್ಯ
ಸರ್ಕಾರ
2
ಎಕರೆ
ಭೂಮಿಯನ್ನು
ನೀಡಿದೆ.
ನವದೆಹಲಿಯಿಂದ
ವಿಶೇಷ
ವಿಮಾನದಲ್ಲಿ
ಅಬ್ದುಲ್
ಕಲಾಂ
ಅವರ
ಮೃತದೇಹವನ್ನು
ಬುಧವಾರ
ಮಧ್ಯಾಹ್ನ
ಮಧುರೈಗೆ
ತರಲಾಗಿದೆ.
[ಬೆಂಗಳೂರಿನ
ಬಗ್ಗೆ
ಅಬ್ದುಲ್
ಕಲಾಂ
ಹೇಳಿದ್ದೇನು?]
ಗುರುವಾರ ಬೆಳಗ್ಗೆ 7 ಗಂಟೆಗೆ ವಿಶೇಷ ವಿಮಾನದ ಮೂಲಕ ಸಿದ್ದರಾಮಯ್ಯ ಅವರು ರಾಮೇಶ್ವರಂಗೆ ತೆರಳಲಿದ್ದಾರೆ. ಬಿ.ಎಸ್.ಯಡಿಯರೂಪ್ಪ ಅವರು ರಾಮೇಶ್ವರಂಗೆ ತೆರಳಿ ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. [ಅಬ್ದುಲ್ ಕಲಾಂ ವಿಧಿವಶ]
ಜಯಲಲಿತಾ ಪಾಲ್ಗೊಳ್ಳುತ್ತಿಲ್ಲ : ತಮಿಳುನಾಡಿನಲ್ಲಿ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದರೂ ಅದರಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಪಾಲ್ಗೊಳ್ಳುತ್ತಿಲ್ಲ. ಅನಾರೋಗ್ಯದ ಕಾರಣ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪಾಲ್ಗೊಳ್ಳಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.[ಮಿಸೈಲ್ ಮ್ಯಾನ್ ಕಲಾಂಗೆ ಗಣ್ಯರ ಅಂತಿಮ ನಮನ]
ಸರ್ಕಾರದ ಪರವಾಗಿ ಮಾಜಿ ಸಿಎಂ ಪನ್ನೀರ್ ಸೆಲ್ವಂ ಸೇರಿದಂತೆ ಏಳು ಮಂದಿ ಸಚಿವರು ಅಂತ್ಯಕ್ರಿಯೆಯಲ್ಲಿ ಪಾಳ್ಗೊಳ್ಳಲಿದ್ದಾರೆ. ಗುರುವಾರ ತಮಿಳುನಾಡಿನಲ್ಲಿ ಸರ್ಕಾರಿ ರಜೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಜಯಲಲಿತಾ ಅವರು ಹೇಳಿದ್ದಾರೆ.