ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ
ಬೆಂಗಳೂರು, ಸೆಪ್ಟೆಂಬರ್ 13 : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.
ಕಾವೇರಿ
ನೀರಿನ
ವಿಚಾರದಲ್ಲಿ
ತಮಿಳುನಾಡಿನ
ವಿರುದ್ಧ
ತಿರುಗಿಬೀಳಲು
ಸಿದ್ದರಾಮಯ್ಯ
ತೀರ್ಮಾನ
ಮಾಡಿದ್ದು,
ರಾಜೀನಾಮೆ
ಸಲ್ಲಿಸಲು
ಚಿಂತನೆ
ನಡೆಸಿದ್ದಾರೆ
ಎಂಬ
ಸುದ್ದಿ
ಮಂಗಳವಾರ
ಬೆಳಗ್ಗೆ
ಹಬ್ಬಿತ್ತು.
ಆದರೆ,
ಈ
ಸುದ್ದಿಯನ್ನು
ಪಕ್ಷ
ತಳ್ಳಿ
ಹಾಕಿದೆ.[ಸುಪ್ರೀಂ
ತೀರ್ಪು:
ಹಿರಿಯ
ವಕೀಲ
ಬಿ
ವಿ
ಆಚಾರ್ಯ
ಗಂಭೀರ
ಹೇಳಿಕೆ]
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಒಂದು ಕಡೆ ಗೋವಾ ಕುಡಿಯುವ ನೀರು ಕೊಡುತ್ತಿಲ್ಲ. ಮತ್ತೊಂದು ಕಡೆ ಕುಡಿಯುವ ನೀರನ್ನು ತಮಿಳುನಾಡು ಕಿತ್ತುಕೊಳ್ಳುತ್ತಿದೆ. ಆದ್ದರಿಂದ ರಾಜೀನಾಮೆ ಸಲ್ಲಿಸಿ ಎಂದು ಕೆಲವು ಸಚಿವರು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದರು.[ಕಾವೇರಿ: ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ ಇದು!]
ಸಿದ್ದರಾಮಯ್ಯ ಗೃಹ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಹಿರಿಯ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ನಾಯಕರು ಆತುರದ ನಿರ್ಧಾರವನ್ನು ಕೈಗೊಳ್ಳಬಾರದು ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.