ರಾಜ್ಯದ ಸಂಸದರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ
ನವದೆಹಲಿ, ಮೇ 12 : ದೆಹಲಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ರಾತ್ರಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಿದರು. ಗುರುವಾರವೂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿರಲಿದ್ದು, ಕಾಂಗ್ರೆಸ್ ಪಕ್ಷದ ವಿವಿಧ ನಾಯಕರನ್ನು ಭೇಟಿಯಾಗಲಿದ್ದಾರೆ.
ಕರ್ನಾಟಕ
ಭವನದಲ್ಲಿ
ರಾಜ್ಯದ
ಎಲ್ಲಾ
ಪಕ್ಷದ
ಸಂಸದರೊಂದಿಗೆ
ಸಿದ್ದರಾಮಯ್ಯ
ಸಭೆ
ನಡೆಸಿದರು.
ಕೇಂದ್ರ
ಸಚಿವರಾದ
ಅನಂತ
ಕುಮಾರ್,
ಸದಾನಂದ
ಗೌಡ,
ರಾಜ್ಯದ
ಸಚಿವರಾದ
ಎಚ್.ಕೆ.
ಪಾಟೀಲ್,
ಡಿ.ಕೆ.
ಶಿವಕುಮಾರ್,
ಮಹದೇವಪ್ಪ,
ಮಹದೇವಪ್ರಸಾದ್,
ಎಂ.ಬಿ.ಪಾಟೀಲ್,
ಎಸ್.ಆರ್.ಪಾಟೀಲ್
ಮುಂತಾದವರು
ಸಭೆಯಲ್ಲಿ
ಪಾಲ್ಗೊಂಡಿದ್ದರು.
[ಬರ
ಪರಿಹಾರ
:
ಸರ್ಕಾರದ
ಕಿವಿ
ಹಿಂಡಲು
ಬಿಜೆಪಿ
ಮನವಿ]
ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ಎಲ್ಲರೂ ಸೇರಿ ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡೋಣ. ಕೇಂದ್ರದ ಮುಂದೆ ಬಾಕಿ ಇರುವ ಯೋಜನೆಗಳನ್ನು ತ್ವರಿತವಾಗಿ ಮಂಜೂರು ಮಾಡಿಸಲು ಎಲ್ಲರ ಸಹಕಾರ ಅಗತ್ಯ ಎಂದು ಸಿದ್ದರಾಮಯ್ಯ ಅವರು ಸಂಸದರಿಗೆ ಮನವಿ ಮಾಡಿದರು. [ಬರ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ ಸರ್ಕಾರ]
ರಾಜ್ಯದಲ್ಲಿ
ಉಂಟಾಗಿರುವ
ಬರ
ಪರಿಸ್ಥಿತಿ,
ಸರ್ಕಾರ
ಕೈಗೊಂಡಿರುವ
ಪರಿಹಾರ
ಕ್ರಮಗಳು,
ಕೇಂದ್ರಕ್ಕೆ
ಸಲ್ಲಿಸಿರುವ
ಮನವಿ
ಕುರಿತು
ಮತ್ತು
ಕೇಂದ್ರದಲ್ಲಿ
ಬಾಕಿ
ಇರುವ
ಯೋಜನೆಗಳ
ಬಗ್ಗೆ
ಮುಖ್ಯಮಂತ್ರಿಗಳು
ಸಂಸದರಿಗೆ
ಮಾಹಿತಿ
ನೀಡಿದರು.
['ಬರ
ಪರಿಸ್ಥಿತಿಯನ್ನು
ರಾಷ್ಟ್ರೀಯ
ವಿಪತ್ತು
ಎಂದು
ಪರಿಗಣಿಸಿ']
ಬಾಕಿ ಇರುವ ರೈಲ್ವೆ ಯೋಜನೆಗಳು, ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ, ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ, ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆ, ಸ್ಮಾರ್ಟ್ ಸಿಟಿ ಮಿಷನ್ಗೆ ಬೆಂಗಳೂರು ನಗರ ಸೇರ್ಪಡೆ, ಐದು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಂಸದರಿಗೆ ಮನವಿ ಮಾಡಿದರು.
ಏರೋಸ್ಪೇಸ್ ಯೂನಿವರ್ಸಿಟಿ ಸ್ಥಾಪನೆ, ಹೈಕೋರ್ಟ್ ನಡವಳಿಕೆಗಳಲ್ಲಿ ಕನ್ನಡ ಬಳಕೆ, ಕರ್ನಾಟಕ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳು ಸಂಸದರ ಗಮನ ಸೆಳೆದರು. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಮತ್ತು ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಒದಗಿಸುವ ಬಗ್ಗೆಯೂ ಚರ್ಚೆ ನಡೆಯಿತು.