ದಸರಾ ಕೊಡುಗೆ : ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ
ಬೆಂಗಳೂರು, ಸೆ. 30: ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮತ್ತೊಮ್ಮೆ ದಸರಾ ಕೊಡುಗೆ ನೀಡಿದೆ. ತುಟ್ಟಿಭತ್ಯೆಯನ್ನು ಶೇ.3.75ರಷ್ಟು ಏರಿಕೆ ಮಾಡಲು ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದಾಗಿ 8.5 ಲಕ್ಷ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ. ಅಧಿಕೃತ ಆದೇಶ ಶೀಘ್ರದಲ್ಲೇ ಹೊರಡಿಸಲಾಗುತ್ತದೆ.
ಕೇಂದ್ರ
ಸರ್ಕಾರ
ತನ್ನ
ನೌಕರರಿಗೆ
ತುಟ್ಟಿಭತ್ಯೆ
ಹೆಚ್ಚಳ
ಮಾಡಿದ
ಬೆನ್ನಲ್ಲೇ
ರಾಜ್ಯಸರ್ಕಾರವೂ
ನೌಕರರ
ತುಟ್ಟಿಭತ್ಯೆ
ಮಾಡುವ
ಪರಿಪಾಠ
ಮುಂದುವರೆದಿದೆ.
ಅದರೆ,
ಶೇ.4.25ರಷ್ಟು
ಹೆಚ್ಚಳ
ಮಾಡುವ
ನಿರೀಕ್ಷೆ
ಹೊಂದಿದ್ದ
ರಾಜ್ಯ
ಸರ್ಕಾರಿ
ನೌಕರರಿಗೆ
ಈಗ
ಮೂಲವೇತನದ
ಶೇ.28.75
ರಿಂದ
ಶೇ.33ಕ್ಕೆ
ಹೆಚ್ಚಳ
ಸಂಬಳ
ಸಿಗಲಿದೆ.
ಇದಕ್ಕೂ
ಮುನ್ನ
ಶೇ.25.25ರಿಂದ
ಶೇ.28.75ಕ್ಕೆ
ಹೆಚ್ಚಳ
ಮಾಡಲಾಗಿತ್ತು.[ಪಿಎಫ್
ಹೊಸ
ನಿಮಯ
:
ಟೇಕ್
ಹೋಮ್
ಸಂಬಳಕ್ಕೆ
ಕುತ್ತು]
ಜುಲೈನಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲಿದ್ದು, ತುಟ್ಟಿಭತ್ಯೆ ಬಾಕಿ ಹಣವನ್ನು ನಗದು ರೂಪದಲ್ಲೇ ಪಾವತಿಸಲು ಉದ್ದೇಶಿಸಲಾಗಿದೆ. ಹಾಲಿ ಸರ್ಕಾರಿ ಹಾಗೂ ನಿವೃತ್ತ ನೌಕರರಿಗೂ ಸಮಾನ ರೀತಿಯ ತುಟ್ಟಿಭತ್ಯೆ ನೀಡಲಾಗುತ್ತದೆ. ಆದರೆ ಗೌರಿ-ಗಣೇಶ ಹಬ್ಬದ ನಂತರ ಈ ತುಟ್ಟಿಭತ್ಯೆ ಹೆಚ್ಚಳದ ಲಾಭ ರಾಜ್ಯ ಸರ್ಕಾರಿ ನೌಕರರಿಗೆ ದೊರೆಯಲಿದೆ.
ಗೌರಿ ಗಣೇಶ ಹಬ್ಬಕ್ಕೂ ಮುನ್ನ ಕೇಂದ್ರ ಸರಕಾರಿ ನೌಕರರ ಬಾಯಿಗೆ ನರೇಂದ್ರ ಮೋದಿ ಸರ್ಕಾರ ಲಡ್ಡು ಹಾಕಿತ್ತು. ಸುಮಾರು 1 ಕೋಟಿಗೂ ಅಧಿಕ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಎನ್ ಡಿಎಸ್ ಸರ್ಕಾರ ಶೇ 6 ರಷ್ಟು ತುಟ್ಟಿಭತ್ಯೆ(DA) ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ವಿವರ ಇಲ್ಲಿ ಓದಿ]
ಕಳೆದ ಏಪ್ರಿಲ್ನಲ್ಲಿ ಜನವರಿಯಿಂದ ಪೂರ್ವಾನ್ವಯವಾಗುವಂತೆ ಶೇ.3.50ಯಷ್ಟು ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರಿ ನೌಕರರು, ಜಿಲ್ಲಾ ಪಂಚಾಯತ್ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಗಳಲ್ಲಿ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರು, ಸರ್ಕಾರದ ಸಹಾಯಾನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೂ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ.
ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಈ ಹೆಚ್ಚಳ ಅನ್ವಯವಾಗಲಿದೆ.