ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಗೆ ಶೋಕಾಸ್ ನೋಟಿಸ್
ಬೆಂಗಳೂರು, ಅ. 19 : ಅನುಮತಿ ಪಡೆಯದೇ ಪತ್ರಿಕಾಗೋಷ್ಠಿ ನಡೆಸಿದ ಕಾರಣಕ್ಕೆ ಮೈಸೂರು ಆಡಳಿತ ತರಬೇತಿ ಕೇಂದ್ರ ನಿರ್ದೇಶಕಿ ರಶ್ಮಿ ಮಹೇಶ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ತಮ್ಮ ಮೇಲೆ ನಡೆದ ಹಲ್ಲೆ ಕುರಿತು ವಿವರಿಸಲು ರಶ್ಮಿ ಮಹೇಶ್ ಮೇಲಧಿಕಾರಿಗಳ ಒಪ್ಪಿಗೆ ಪಡೆಯದೇ ಪತ್ರಿಕಾಗೋಷ್ಠಿ ನಡೆಸಿದ್ದರು. ಅಲ್ಲದೇ ಇಲಾಖೆಯಲ್ಲಿನ ಹಣ ದುರುಪಯೋಗವಾಗಿದೆ ಎಂದು ಹೇಳಿದ್ದರು. ಇದನ್ನು ಮನಗಂಡ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಸಾರ್ವಜನಿಕವಾಗಿ ಇಂಥ ಹೇಳಿಕೆ ನೀಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.[ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಪತ್ರಿಕಾಗೋಷ್ಠಿ]
ಮನೆ
ಕಚೇರಿಗೆ
ಬಿಗಿ
ಭದ್ರತೆ
ರಶ್ಮಿ
ಮಹೇಶ್
ಮೇಲಿನ
ಹಲ್ಲೆ
ಪ್ರಕರಣಕ್ಕೆ
ಸಂಬಂಧಿಸಿ
ಮತ್ತಿಬ್ಬರು
ಆರೋಪಿಗಳನ್ನು
ಮೈಸೂರು
ಪೊಲೀಸರು
ಬಂಧಿಸಿದ್ದಾರೆ.
ಅಲ್ಲದೇ
ರಶ್ಮಿ
ಅವರ
ಮನೆ
ಮತ್ತು
ಕಚೇರಿಗೆ
ವಿಶೇಷ
ಭದ್ರತೆ
ಕಲ್ಪಿಸಲಾಗಿದೆ.[ರಶ್ಮಿ
ಮಹೇಶ್
ಮೇಲೆ
ಹಲ್ಲೆ]
ರಾಜ್ಯ ಸರ್ಕಾರ ನಿಷ್ಠಾವಂತ ಅಧಿಕಾರಿಗಳ ಹಿತ ಕಾಯಲು ಬದ್ಧವಾಗಿದೆ. ಹಲ್ಲೆ ಪ್ರಕರಣದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇರುವುದು ಸರ್ಕಾರಕ್ಕೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ರಶ್ಮಿ ಮಹೇಶ್ ಗೆ ನೋಟಿಸ್ ನೀಡಿರುವ ಮುಖರ್ಜಿಗೆ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ರಶ್ಮಿ ಮಹೇಶ್ ಪರವಾಗಿ ರಾಜ್ಯಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ.
ಏನಿದು
ಪ್ರಕರಣ?
ಮೈಸೂರು
ಆಡಳಿತ
ತರಬೇತಿ
ಕೇಂದ್ರದ
ಉದ್ಯೋಗಿ
ವೆಂಕಟೇಶ್
ಆತ್ಮಹತ್ಯೆ
ಮಾಡಿಕೊಂಡ
ಹಿನ್ನೆಲೆಯಲ್ಲಿ
ಸ್ಥಳಕ್ಕೆ
ಭೇಟಿ
ನೀಡಿದ್ದ
ರಶ್ಮಿ
ಮಹೇಶ್
ಮೇಲೆ
ಹಲ್ಲೆ
ನಡೆದಿತ್ತು.
ಹಲ್ಲೆ
ನಂತರ
ರಶ್ಮಿ
ಪತ್ರಿಕಾಗೋಷ್ಠಿ
ನಡೆಸಿ
ವಿವರಣೆ
ನೀಡಿದ್ದರು.