ಎಸಿಬಿಗೆ ಲೋಕಾಯುಕ್ತದ ಪ್ರಕರಣ ವರ್ಗಾವಣೆ ಇಲ್ಲ
ಬೆಂಗಳೂರು, ಏಪ್ರಿಲ್ 27 : ಎಸಿಬಿ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮುಖಭಂಗವಾಗಿದೆ. ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಎಸಿಬಿಗೆ ವರ್ಗಾವಣೆ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಲೋಕಾಯುಕ್ತದಲ್ಲಿನ
ಪ್ರಕರಣಗಳನ್ನು
ಭ್ರಷ್ಟಾಚಾರ
ನಿಗ್ರಹ
ದಳ
(ಎಸಿಬಿ)ಗೆ
ವರ್ಗಾವಣೆ
ಮಾಡಬಾರದು
ಎಂದು
ವಕೀಲ
ಚಿದಾನಂದ
ಅರಸ್
ಅವರು
ಪಿಐಎಲ್
ಸಲ್ಲಿಸಿದ್ದರು.
ಅರ್ಜಿಯ
ವಿಚಾರಣೆ
ನಡೆಸಿದ
ಕೋರ್ಟ್
ಗುರುವಾರ
ಪ್ರಕರಣವನ್ನು
ವರ್ಗಾವಣೆ
ಮಾಡಬಾರದು
ಎಂದು
ಹೇಳಿದೆ.
[ಎಸಿಬಿ
:
ಸಿದ್ದರಾಮಯ್ಯ
ವಿರುದ್ಧ
ಮೊದಲ
ದೂರು]
ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ಕುರಿತಾದ ತನಿಖೆಯನ್ನು ಮುಂದುವರೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ ಕೋರ್ಟ್, ಸರ್ಕಾರ ಯಾವುದೇ ಪ್ರಕರಣವನ್ನು ನೂತನವಾಗಿ ರಚನೆಯಾಗಿರುವ ಎಸಿಬಿಗೆ ವರ್ಗಾವಣೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಿದೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]
ಮನವಿ ತಳ್ಳಿ ಹಾಕಿದ ಕೋರ್ಟ್ : ಅರ್ಜಿಯ ವಿಚಾರಣೆ ಸಮಯದಲ್ಲಿ ಅಡ್ವೋಕೇಟ್ ಜನರಲ್ ಎಂ.ಆರ್.ನಾಯಕ್ ಅವರು, ಹೈಕೋರ್ಟ್ಗೆ ಮನವಿ ಸಲ್ಲಿಸಿ ಎಸಿಬಿಯಲ್ಲಿ ಸಾಕಷ್ಟು ತಜ್ಞರಿದ್ದು, ಅದು ಭ್ರಷ್ಟಾಚಾರ ಪ್ರಕಣಗಳನ್ನು ನಿರ್ವಹಿಸಲು ಸಮರ್ಥವಾಗಿದೆ ಎಂದು ತಿಳಿಸಿದರು. ಆದರೆ, ಕೋರ್ಟ್ ಮನವಿಯನ್ನು ತಳ್ಳಿಹಾಕಿತು.
ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ್ದು, ಲೋಕಾಯುಕ್ತದಲ್ಲಿನ ಸುಮಾರು 750ಕ್ಕೂ ಅಧಿಕ ಪ್ರಕರಣಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಿತ್ತು. ಆದರೆ, ಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದ ಸರ್ಕಾರಕ್ಕೆ ಹಿನ್ನಡೆ ಆಗಿದೆ.
ತೀರ್ಪಿನ ಪ್ರತಿ ಸಿಕ್ಕ ಬಳಿಕ ಪ್ರತಿಕ್ರಿಯೆ : 'ಎಸಿಬಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿ ಸಿಕ್ಕಿಲ್ಲ. ಪ್ರತಿ ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.