ತಮಿಳ್ನಾಡಿಗೆ ಕಾವೇರಿ ಬಿಡಲೇಬೇಕು : ಸುಪ್ರೀಂಕೋರ್ಟ್ ಆಜ್ಞೆ!
ಬೆಂಗಳೂರು, ಸೆಪ್ಟೆಂಬರ್ 02 : ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತಮಿಳುನಾಡು 50.52 ಟಿಎಂಸಿ ನೀರು ಬಿಡಲು ಸೂಚನೆ ನೀಡಿ ಎಂದು ಕೋರ್ಟ್ ಮೊರೆ ಹೋಗಿತ್ತು.
'ಬದುಕಿ
ಮತ್ತು
ಬದುಕಲು
ಬಿಡಿ'
ಎಂದು
ಶುಕ್ರವಾರ
ಹೇಳಿರುವ
ಸುಪ್ರೀಂಕೋರ್ಟ್,
ತಮಿಳುನಾಡಿಗೆ
ಎಷ್ಟು
ನೀರು
ಬಿಡಲು
ಸಾಧ್ಯ?
ಎಂದು
ಸೋಮವಾರ
ಕೋರ್ಟ್ಗೆ
ತಿಳಿಸುವಂತೆ
ಕರ್ನಾಟಕಕ್ಕೆ
ಸೂಚನೆ
ಕೊಟ್ಟಿದೆ.
ಇದರಿಂದಾಗಿ
ಮತ್ತೊಮ್ಮೆ
ಕಾವೇರಿ
ವಿವಾದದ
ಹೋರಾಟ
ಆರಂಭವಾಗುವ
ಸೂಚನೆ
ಸಿಕ್ಕಿದೆ.[ನಮಗೇ
ನೀರಿಲ್ಲ,
ಇನ್ನು
ತಮಿಳ್ನಾಡಿಗೆ
ಎಲ್ಲಿಂದ
ಬಿಡೋಣ?]
ಕಾವೇರಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಶಾಂತಿ ಕಾಪಾಡಬೇಕು ಎಂದು ಹೇಳಿರುವ ಕೋರ್ಟ್, ಕಾವೇರಿ ನ್ಯಾಯಾಧೀಕರಣದ ಆದೇಶವನ್ನು ಧಿಕ್ಕರಿಸಿ ನೀರು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನೀರು ಹರಿಸುವ ಪ್ರಯತ್ನವನ್ನಾದರೂ ಮಾಡಬೇಕು ಎಂದು ವಿಚಾರಣೆ ಸಮಯದಲ್ಲಿ ಹೇಳಿದೆ.[65 ಟಿಎಂಸಿಯಲ್ಲಿ 50 ಟಿಎಂಸಿ ಕೊಟ್ಟರೆ ಉಳಿಯುವುದೆಷ್ಟು!?]
9 ಲಕ್ಷ ಎಕರೆ ಸಾಂಬಾ ಬೆಳೆಗೆ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಒತ್ತಾಯಿಸಿತ್ತು. ಕಾವೇರಿ ನೀರು ಹರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ಸಂಕಷ್ಟ ಉಂಟಾಗಿದೆ. ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಕರ್ನಾಟಕ ಹೇಳಿತ್ತು.[ಆಗಸ್ಟ್ 30ರ ತನಕ ಮಾತ್ರ KRS ನಿಂದ ನೀರು ಬಿಡುಗಡೆ]
ಕಾವೇರಿ ನೀರು ಬಿಡುಗಡೆ ಬಗ್ಗೆ ಚರ್ಚಿಸಲು ಕಳೆದ ಶನಿವಾರ ಸರ್ವಪಕ್ಷ ಸಭೆ ನಡೆದಿತ್ತು. ಸಭೆಯ ನಂತರ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ತಮಿಳುನಾಡಿಗೆ ನೀರು ಬಿಡದಂತೆ ಒಗ್ಗಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ವಿಪಕ್ಷಗಳು ಕೂಡಾ ಬೆಂಬಲ ನೀಡಿದ್ದು, ರಾಜ್ಯದ ಪರಿಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು' ಎಂದು ಹೇಳಿದ್ದರು.