ಫೆಬ್ರವರಿ 26ಕ್ಕೆ ರಾಮನಗರದಲ್ಲಿ 'ಜಲಾಂದೋಲನ' ಮ್ಯಾರಥಾನ್
ನೀರಿನ ಪರಿಣಾಮಕಾರಿ ಬಳಕೆ ಹಾಗೂ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಫೆಬ್ರವರಿ 26ರಂದು ರಾಮನಗರ ಜಿಲ್ಲಾಡಳಿತದಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಅಂದಹಾಗೆ ಈ ವರ್ಷ ರಾಮನಗರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ
ರಾಮನಗರ, ಫೆಬ್ರವರಿ 23: ಜಲಾಂದೋಲನ ಅಭಿಯಾನದ ಭಾಗವಾಗಿ ರಾಮನಗರ ಜಿಲ್ಲಾಡಳಿತದಿಂದ ಮ್ಯಾರಥಾನ್ ಆಯೋಜಿಸಲು ತೀರ್ಮಾನಿಸಲಾಗಿದೆ. ನೀರಿನ ಸಂರಕ್ಷಣೆ ಹಾಗೂ ಪರಿಣಾಮಕಾರಿ ನೀರು ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಕಾರಣದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2016-17ರಲ್ಲಿ ರಾಮನಗರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು, ಇದರಿಂದ ನೀರಿನ ಸಮಸ್ಯೆ ತಾರಕಕ್ಕೇರಿದೆ. "ರಾಮನಗರ ಜಿಲ್ಲೆಯಾದ್ಯಂತ ನೀರಿನ ಸಂರಕ್ಷಣೆ ಹಾಗೂ ಪರಿಣಾಮಕಾರಿ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಬಿ.ಆರ್.ಮಮತಾ ತಿಳಿಸಿದ್ದಾರೆ.[ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ...]
ಬಾಷ್ ಫೌಂಡೇಷನ್, ಬಿಡದಿ ಕೈಗಾರಿಕಾ ಒಕ್ಕೂಟ ಮತ್ತು ರೋಟರಿ ಸಿಲ್ಕ್ ಸಹಯೋಗದಲ್ಲಿ ಜಿಲ್ಲಾಡಳಿತವು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇನ್ನು ಮ್ಯಾರಥಾನ್ ಅನ್ನು ಫೆಬ್ರವರಿ 26ರಂದು ರಾಮನಗರ ಜಿಲ್ಲಾಡಳಿತವು ಆಯೋಜಿಸಿದ್ದು, ಇದಕ್ಕೆ ಯೆಲ್ಲೋ ಮತ್ತು ರೆಡ್ ಫೌಂಡೇಷನ್ ಆಫ್ ರಾಮನಗರದ ಸಹಯೋಗವಿದೆ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]
ಜಿಲ್ಲಾಡಳಿತವು ಈಗಾಗಲೇ ಮಾಧ್ಯಮ ಜಲಾಂದೋಲನ, ಕೃಷಿ ಜಲಾಂದೋಲನ, ಶಿಕ್ಷಣ ಜಲಾಂದೋಲನ ಮತ್ತು ಮಹಿಳಾ ಜಲಾಂದೋಲನ ಎಂಬ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.