ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್‌ನಲ್ಲಿ ಜಯ ಕರ್ನಾಟಕ-ಕರವೇ ಕಾರ್ಯಕರ್ತರ ಪುಂಡಾಟ

|
Google Oneindia Kannada News

ಯಾದಗಿರಿ, ಜೂ. 18 : ಯಾದಗಿರಿಯ ಎನ್.ವಿ.ಎಂ. ಬಾರ್‌ನಲ್ಲಿ ಬುಧವಾರ ರಾತ್ರಿ ಮಾರಾಮಾರಿ ನಡೆದಿದೆ. ವೇಟರ್ ಮತ್ತು ಬಾರ್ ಸಹಾಯಕನಿಗೆ ಜಯ ಕರ್ನಾಟಕ ಮತ್ತು ಕರವೇ ಕಾರ್ಯಕರ್ತರು ಥಳಿಸಿದ್ದಾರೆ. ಘಟನೆ ಕುರಿತು 5 ಜನರ ವಿರುದ್ಧ ದೂರು ದಾಖಲಾಗಿದೆ.

ಸಿಗರೇಟ್ ಸೇದಬೇಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಜಯ ಕರ್ನಾಟಕ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷ ಹಾಗೂ ಕರವೇ ನಾರಾಯಣಗೌಡರ ಬಣದ ಕಾರ್ಯಕರ್ತರು ವೇಟರ್ ಹಾಗೂ ಸಹಾಯಕರಿಗೆ ಥಳಿಸಿದ್ದಾರೆ. ಬಾರ್ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. [ನಾಡಿನ ಸಮಸ್ತ ಕುಡುಕರಿಗೆ ಸರಕಾರದಿಂದ ಸಿಹಿ ಟಾನಿಕ್]

yadagiri

ವೇಟರ್‌ ಬಸವರಾಜ್ ಅವರಿಗೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ತೇಜರಾಜ್ ರಾಠೋಡ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ರಾಮು ರಾಠೋಡ್ ಹಾಗೂ ಮತ್ತಿತರರು ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. [ಡಾನ್ಸ್‌ ಬಾರ್‌ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್]

ಹಲ್ಲೆಯಿಂದ ಗಾಯಗೊಂಡ ಬಸವರಾಜ್ ಅವರನ್ನು ಯಾದಗಿದಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಐದು ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bar worker
English summary
Karnataka rakshana vedike and Jaya Karnataka members had allegedly beaten up two persons in NMV bar in Yadagiri on Wednesday night. Police registered complaint against five members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X