ಬಾರ್ನಲ್ಲಿ ಜಯ ಕರ್ನಾಟಕ-ಕರವೇ ಕಾರ್ಯಕರ್ತರ ಪುಂಡಾಟ
ಯಾದಗಿರಿ, ಜೂ. 18 : ಯಾದಗಿರಿಯ ಎನ್.ವಿ.ಎಂ. ಬಾರ್ನಲ್ಲಿ ಬುಧವಾರ ರಾತ್ರಿ ಮಾರಾಮಾರಿ ನಡೆದಿದೆ. ವೇಟರ್ ಮತ್ತು ಬಾರ್ ಸಹಾಯಕನಿಗೆ ಜಯ ಕರ್ನಾಟಕ ಮತ್ತು ಕರವೇ ಕಾರ್ಯಕರ್ತರು ಥಳಿಸಿದ್ದಾರೆ. ಘಟನೆ ಕುರಿತು 5 ಜನರ ವಿರುದ್ಧ ದೂರು ದಾಖಲಾಗಿದೆ.
ಸಿಗರೇಟ್
ಸೇದಬೇಡಿ
ಎಂದು
ಹೇಳಿದ್ದಕ್ಕೆ
ಕೋಪಗೊಂಡ
ಜಯ
ಕರ್ನಾಟಕ
ಸಂಘಟನೆಯ
ಯಾದಗಿರಿ
ಜಿಲ್ಲಾಧ್ಯಕ್ಷ
ಹಾಗೂ
ಕರವೇ
ನಾರಾಯಣಗೌಡರ
ಬಣದ
ಕಾರ್ಯಕರ್ತರು
ವೇಟರ್
ಹಾಗೂ
ಸಹಾಯಕರಿಗೆ
ಥಳಿಸಿದ್ದಾರೆ.
ಬಾರ್
ಪಿಠೋಪಕರಣಗಳನ್ನು
ಧ್ವಂಸಗೊಳಿಸಿದ್ದಾರೆ.
[ನಾಡಿನ
ಸಮಸ್ತ
ಕುಡುಕರಿಗೆ
ಸರಕಾರದಿಂದ
ಸಿಹಿ
ಟಾನಿಕ್]
ವೇಟರ್ ಬಸವರಾಜ್ ಅವರಿಗೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ತೇಜರಾಜ್ ರಾಠೋಡ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ರಾಮು ರಾಠೋಡ್ ಹಾಗೂ ಮತ್ತಿತರರು ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. [ಡಾನ್ಸ್ ಬಾರ್ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್]
ಹಲ್ಲೆಯಿಂದ
ಗಾಯಗೊಂಡ
ಬಸವರಾಜ್
ಅವರನ್ನು
ಯಾದಗಿದಿ
ಜಿಲ್ಲಾ
ಆಸ್ಪತ್ರೆಗೆ
ದಾಖಲು
ಮಾಡಲಾಗಿದೆ.
ಈ
ಘಟನೆಗೆ
ಸಂಬಂಧಿಸಿದಂತೆ,
ಮೂವರನ್ನು
ಪೊಲೀಸರು
ವಶಕ್ಕೆ
ಪಡೆದುಕೊಂಡಿದ್ದು,
ಐದು
ಜನರ
ವಿರುದ್ಧ
ನಗರ
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.