ಪ್ರಯಾಣಿಕರೇ ಗಮನಿಸಿ, ರೈಲ್ವೆ ಬಂದ್ ಬಗ್ಗೆ ಆತಂಕ ಬೇಡ!
ಬೆಂಗಳೂರು, ಸೆಪ್ಟೆಂಬರ್ 14 : ಕನ್ನಡ ಒಕ್ಕೂಟ ಸೆ.15ರಂದು ಕರ್ನಾಟಕದಲ್ಲಿ ರೈಲ್ವೆ ಬಂದ್ಗೆ ಕರೆ ನೀಡಿದೆ. ಆದರೆ, ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ. ನಿಗದಿತ ವೇಳಾಪಟ್ಟಿಯಂತೆ ರೈಲುಗಳು ಸಂಚಾರ ನಡೆಸಲಿವೆ ಎಂದು ಪೊಲೀಸರು ಹೇಳಿದ್ದಾರೆ.
ಕಾವೇರಿ
ನದಿ
ನೀರು
ಹಂಚಿಕೆ
ಮತ್ತು
ಮಹದಾಯಿ
ವಿವಾದದಲ್ಲಿ
ಬಂದ
ತೀರ್ಪನ್ನು
ಖಂಡಿಸಿ
ರೈಲ್ವೆ
ಬಂದ್
ನಡೆಸಲಾಗುತ್ತಿದೆ.
ಗುರುವಾರ
ಬೆಳಗ್ಗೆ
6
ರಿಂದ
ಸಂಜೆ
6
ಗಂಟೆಯ
ತನಕ
ರೈಲ್ವೆ
ಬಂದ್
ಕರೆ
ನೀಡಲಾಗಿದೆ.
ಇದರಿಂದ
ರೈಲು
ಪ್ರಯಾಣಿಕರು
ಆತಂಕಗೊಂಡಿದ್ದಾರೆ.[ಸೆಪ್ಟೆಂಬರ್
15ರಂದು
ರೈಲ್ವೆ
ಬಂದ್]
ಪ್ರಯಾಣಿಕರು
ಆತಂಕ
ಪಡುವ
ಅಗತ್ಯವಿಲ್ಲ,
ರೈಲುಗಳ
ಸಂಚಾರ
ವೇಳಾಪಟ್ಟಿಯಂತೆ
ನಡೆಯಲು
ಅಗತ್ಯ
ಕ್ರಮಗಳನ್ನು
ಕೈಗೊಳ್ಳಲಾಗಿದೆ
ಎಂದು
ರೈಲ್ವೆ
ಪೊಲೀಸರು
ಹೇಳಿದ್ದಾರೆ.
ಯಾವುದೇ
ಪ್ರಯಾಣಿಕರು
ತೊಂದರೆಗೆ
ಸಿಲುಕಿದರೆ
18004251363
ನಂಬರ್ಗೆ
ಕರೆ
ಮಾಡುವಂತೆ
ಮನವಿ
ಮಾಡಿದ್ದಾರೆ.[ರೈಲು
ಟಿಕೆಟ್
ಕೊಳ್ಳಲು
ಆಧಾರ್
ಕಡ್ಡಾಯ]
@BlrCityPolice @blrcitytraffic All security arrangements made in all Railway stations of Karnataka. Tomorrow Trains will be running normally
— KAR Railway Police (@KARailwayPolice) September 14, 2016
ಬೆಂಗಳೂರು ನಗರದಲ್ಲಿ ಸೋಮವಾರ ನಡೆದ ಗಲಭೆಯ ಬಳಿಕ ಜನ ಜೀವನ ಬುಧವಾರ ಸಹಜ ಸ್ಥಿತಿಗೆ ಬಂದಿದೆ. ರಸ್ತೆಗಳು ವಾಹನಗಳಿಂದ ತುಂಬಿ ಹೋಗಿವೆ. ಅಂಗಡಿಗಳು ಬಾಗಿಲು ತೆರಿದಿವೆ. 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಕರ್ಫ್ಯೂವನ್ನು ಪೊಲೀಸರು ತೆರವುಗೊಳಿಸಿದ್ದಾರೆ.
ಆದರೆ, ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇನ್ನೂ ಜಾರಿಯಲ್ಲಿದೆ. ಅದನ್ನು ತೆರವುಗೊಳಿಸುವ ಬಗ್ಗೆ ಪೊಲೀಸರು ಇನ್ನೂ ನಿರ್ಧಾರವನ್ನು ಕೈಗೊಂಡಿಲ್ಲ. ಹಲವು ಖಾಸಗಿ ಶಾಲೆಗಳು ಬುಧವಾರವೂ ರಜೆ ಘೋಷಣೆ ಮಾಡಿದ್ದವು. ಗುರುವಾರದಿಂದ ಅವುಗಳು ಬಾಗಿಲು ತೆರೆಯಲಿವೆ.