ರೈಲ್ವೆ ಬಂದ್ : ಯಾವುದೇ ರೈಲು ಸಂಚಾರದಲ್ಲಿ ವ್ಯತ್ಯಯವಿಲ್ಲ
ಬೆಂಗಳೂರು, ಸೆಪ್ಟೆಂಬರ್ 15 : ಕನ್ನಡ ಒಕ್ಕೂಟ ಕರೆ ನೀಡಿರುವ ರೈಲ್ವೆ ಬಂದ್ನಿಂದಾಗಿ ಯಾವುದೇ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲಾ ರೈಲುಗಳು ಸಂಚಾರ ನಡೆಸುತ್ತಿವೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.
ಬೆಂಗಳೂರು
ನಗರದ
ರೈಲು
ನಿಲ್ದಾಣಗಳು,
ಮಂಡ್ಯ
ಜಿಲ್ಲೆಯ
ವಿವಿಧ
ರೈಲು
ನಿಲ್ದಾಣಗಳಿಗೆ
ಬಿಗಿ
ಪೊಲೀಸ್
ಬಂದೋಬಸ್ತ್
ವ್ಯವಸ್ಥೆ
ಮಾಡಲಾಗಿದೆ.
ತಮಿಳುನಾಡಿಗೆ
ಕಾವೇರಿ
ನದಿ
ನೀರು
ಹರಿಸುವುದನ್ನು
ಖಂಡಿಸಿ
ರೈಲ್ವೆ
ಬಂದ್ಗೆ
ಕರೆ
ನೀಡಲಾಗಿದೆ.[ಕರ್ನಾಟಕದಲ್ಲಿ
ರೈಲ್ವೆ
ಬಂದ್,
ಕ್ಷಣ-ಕ್ಷಣದ
ಮಾಹಿತಿ]
ಮುಂಜಾನೆಯಿಂದ
ಬೆಂಗಳೂರಿನ
ಕ್ರಾಂತಿವೀರ
ಸಂಗೊಳ್ಳಿ
ರಾಯಣ್ಣ
ರೈಲು
ನಿಲ್ದಾಣ,
ಕಂಟೋನ್ಮೆಂಟ್
ಮತ್ತು
ಯಶವಂತಪುರ
ರೈಲು
ನಿಲ್ದಾಣದಲ್ಲಿ
ನಿಗದಿತ
ವೇಳಾಪಟ್ಟಿಯಂತೆ
ಸಂಚಾರ
ನಡೆಸುತ್ತಿವೆ.
ಪ್ರಯಾಣಿಕರ
ಸುರಕ್ಷತೆಗಾಗಿ
ಅಗತ್ಯ
ಕ್ರಮಗಳನ್ನು
ಕೈಗೊಳ್ಳಲಾಗಿದೆ
ಎಂದು
ಪೊಲೀಸರು
ಹೇಳಿದ್ದಾರೆ.[ಪ್ರಯಾಣಿಕರೇ
ಗಮನಿಸಿ,
ರೈಲ್ವೆ
ಬಂದ್
ಬಗ್ಗೆ
ಆತಂಕ
ಬೇಡ]
Since 4 am to 9 am 38 trains left on time today.No reasons to worry.Have a safe and happy journey....
— KAR Railway Police (@KARailwayPolice) September 15, 2016
ಮಂಡ್ಯ
ಜಿಲ್ಲೆಯ
ವಿವಿಧ
ರೈಲು
ನಿಲ್ದಾಣಗಳಲ್ಲಿ
ಭದ್ರತೆಗಾಗಿ
ಹೆಚ್ಚುವರಿ
ಪೊಲೀಸ್
ಪಡೆಗಳನ್ನು
ನಿಯೋಜನೆ
ಮಾಡಲಾಗಿದೆ.
ಕರ್ನಾಟಕ
ರಕ್ಷಣಾ
ವೇದಿಕೆ
ಸದಸ್ಯರು
ರೈಲು
ನಿಲ್ದಾಣಕ್ಕೆ
ಮುತ್ತಿಗೆ
ಹಾಕಲು
ಪ್ರಯತ್ನಿಸಿದ್ದು,
ಅವರನ್ನು
ಪೊಲೀಸರು
ವಶಕ್ಕೆ
ಪಡೆದಿದ್ದಾರೆ.
This trains cancelled from Bidar railway station. pic.twitter.com/91ZGZKZioC
— KAR Railway Police (@KARailwayPolice) September 15, 2016