ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ
ಬೆಂಗಳೂರು, ಅ. 21 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ವೈದ್ಯಕೀಯ ಪರೀಕ್ಷೆ ನಡೆಸಲು ಸಿಐಡಿ ನೀಡಿದ್ದ ನೋಟಿಸ್ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಂಧ್ಯಂತರ ತಡೆ ನೀಡಿದೆ.
ಅ.21ರ
ಮಂಗಳವಾರ
ಬೆಳಗ್ಗೆ
9
ಗಂಟೆಗೆ
ರಾಘವೇಶ್ವರ
ಶ್ರೀಗಳು
ಬೆಂಗಳೂರಿನ
ವಿಕ್ಟೋರಿಯಾ
ಆಸ್ಪತ್ರೆಗೆ
ವೈದ್ಯಕೀಯ
ಪರೀಕ್ಷೆಗೆ
ಹಾಜರಾಗಬೇಕು
ಎಂದು
ಸಿಐಡಿ
ಅಧಿಕಾರಿಗಳು
ನೋಟಿಸ್
ಜಾರಿಗೊಳಿಸಿದ್ದರು.
ಸ್ವಾಮೀಜಿಗಳ
ಪರ
ವಕೀಲರು
ಇದನ್ನು
ಹೈಕೋರ್ಟ್ನಲ್ಲಿ
ಪ್ರಶ್ನಿಸಿದ್ದರು.
[ಶ್ರೀ
ಬೆಂಬಲಕ್ಕೆ
ನಿಂತ
ರಾಮಕಥಾ
ಕಲಾವಿದರು]
ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರ ಏಕಸದಸ್ಯ ಪೀಠ, ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ ಮತ್ತು ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸಿಐಡಿ ಪರ ವಕೀಲರಿಗೆ ಸೂಚನೆ ನೀಡಿದೆ. [ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು]
ಅರ್ಜಿಯಲ್ಲೇನಿತ್ತು : ರಾಘವೇಶ್ವರ ಶ್ರೀಗಳ ಪರ ವಕೀಲರು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ, ಶ್ರೀಗಳು ನಿರಂತರವಾಗಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಆದರೆ, ಸಿಐಡಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ್ದಾರೆ.
ಸಿಐಡಿ ನೋಟಿಸ್ನಲ್ಲಿ ಯಾವ ಪರೀಕ್ಷೆ, ಪರೀಕ್ಷೆ ನಡೆಸಲು ಕಾರಣಗಳೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ವೈದ್ಯಕೀಯ ಪರೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ರಾಘವೇಶ್ವರ ಶ್ರೀಗಳು ಐದು ದಿನ ಸಿಐಡಿ ವಿಚಾರಣೆ ಎದುರಿಸಿದ್ದು, ದೀಪಾವಳಿ ಮುಗಿದ ನಂತರ ವಿಚಾರಣೆಗೆ ಮತ್ತೆ ಹಾಜರಾಗಲಿದ್ದಾರೆ.