ಪತ್ರಿಕೆ ಸೋರಿಕೆ ಹಗರಣ, ಪ್ರಾಂಶುಪಾಲರ ಮೇಲೆ ಸಿಐಡಿ ಕಣ್ಣು
ಬೆಂಗಳೂರು, ಏಪ್ರಿಲ್ 09 : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ದೂರವಾಣಿ ಕರೆಗಳ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. ಖಾಸಗಿ ಕಾಲೇಜಿನ ಪ್ರಾಂಶುಪಾಲ ಸೇರಿದಂತೆ ಮೂವರ ಮೇಲೆ ಕಣ್ಣಿಟ್ಟಿದ್ದಾರೆ.
ಪದವಿ
ಪೂರ್ವ
ಶಿಕ್ಷಣ
ಇಲಾಖೆಯ
ಹಲವು
ಅಧಿಕಾರಿಗಳು
ಮತ್ತು
ಮೂರು
ವರ್ಷದಿಂದ
ಪ್ರಶ್ನೆ
ಪತ್ರಿಕೆ
ಸಿದ್ಧಪಡಿಸಿದ
ಉಪನ್ಯಾಸಕರನ್ನು
ಸಿಐಡಿ
ಅಧಿಕಾರಿಗಳು
ವಿಚಾರಣೆ
ನಡೆಸುವ
ಸಾಧ್ಯತೆ
ಇದೆ.
ಈಗಾಗಲೇ
ಬಂಧಿತರಾಗಿರುವ
5
ಆರೋಪಿಗಳು
ವಿಚಾರಣೆ
ವೇಳೆ
ಹಲವು
ಮಾಹಿತಿಗಳನ್ನು
ನೀಡಿದ್ದಾರೆ.
[ಪತ್ರಿಕೆ
ಹಗರಣ
:
ಇಬ್ಬರು
ಶಿಕ್ಷಕರು
9
ದಿನಗಳ
ಕಾಲ
ಸಿಐಡಿ
ವಶಕ್ಕೆ]
ಖಾಸಗಿ ಕಾಲೇಜಿನ ಪ್ರಾಂಶುಪಾಲ ಮತ್ತು ಮೂವರು ಉಪನ್ಯಾಕರ ಹೆಸರನ್ನು ಆರೋಪಿಗಳು ಹೇಳಿದ್ದು, ಸಿಐಡಿ ಅವರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳನ್ನು ಮುಂದಿನ ವಾರ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. [ಪತ್ರಿಕೆ ಸೋರಿಕೆ ಹಗರಣ, ಇಬ್ಬರು ದೈಹಿಕ ಶಿಕ್ಷಕರ ಬಂಧನ]
ಇದೊಂದು ದೊಡ್ಡ ಹಗರಣ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದು, ಹಲವು ಉಪನ್ಯಾಸಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ವಿಚಾರಣೆ ನಡೆಸಬೇಕಾದ ಉಪನ್ಯಾಸಕರ ಪಟ್ಟಿಯನ್ನು ಸಿಐಡಿ ಸಿದ್ಧಪಡಿಸಿದೆ. [ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]
ಪರೀಕ್ಷೆ ರದ್ದಾಗಿತ್ತು : 2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಮಾರ್ಚ್ 31ರಂದು ಮರು ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಅಂದು ಬೆಳಗ್ಗೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಸದ್ಯ, ಏ.12ರಂದು ಮರುಪರೀಕ್ಷೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.