ಸೆ.10ರಂದು ರಾಜ್ಯದಲ್ಲಿ ರೈಲು ಸಂಚಾರ ಬಂದ್
ಬೆಂಗಳೂರು, ಆಗಸ್ಟ್ 24 : 'ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಸೆ.10ರಂದು ರೈಲು ಬಂದ್ ಚಳವಳಿಗೆ ಕರೆ ನೀಡಲಾಗಿದೆ. ಅಂದು ಜನರು ರೈಲು ನಿಲ್ದಾಣಕ್ಕೆ ಬರಬಾರದು' ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ
ಮಾತನಾಡಿದ
ಕನ್ನಡ
ಚಳವಳಿ
ವಾಟಾಳ್
ಪಕ್ಷದ
ಅಧ್ಯಕ್ಷ
ವಾಟಾಳ್
ನಾಗರಾಜ್
ಅವರು,
'ಸೆ.10ರ
ಶನಿವಾರ
ಬೆಳಗ್ಗೆ
6
ಗಂಟೆಯಿಂದ
ಸಂಜೆ
6
ಗಂಟೆಯ
ತನಕ
ರೈಲು
ಬಂದ್
ಚಳವಳಿಯನ್ನು
ರಾಜ್ಯದ
ಎಲ್ಲಾ
ಜಿಲ್ಲೆಗಳಲ್ಲಿ
ನಡಸಲಾಗುತ್ತದೆ'
ಎಂದು
ಹೇಳಿದರು.[ಕಳಸಾ
ಬಂಡೂರಿ
ಯೋಜನೆ,
ವಿವಾದ
ಮತ್ತು
ನಾವು]
'ಮೊದಲು ಆ.27ರಂದು ರೈಲು ತಡೆ ಚಳವಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಚಳವಳಿಯನ್ನು ಸೆ.10ಕ್ಕೆ ಮುಂದೂಡಲಾಗಿದೆ. ಸಾವಿರಕ್ಕೂ ಅಧಿಕ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ' ಎಂದು ವಾಟಾಳ್ ನಾಗರಾಜ್ ತಿಳಿಸಿದರು.[ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ]
'ರೈಲ್ವೆ ಬಂದ್ನಲ್ಲಿ ಪಾಲ್ಗೊಳ್ಳುವಂತೆ ರೈಲ್ವೆ ಇಲಾಖೆ, ರೈಲ್ವೆ ಕಾರ್ಮಿಕ ಒಕ್ಕೂಟ, ರೈಲ್ವೆ ಕನ್ನಡ ಸಂಘ, ಸಾಹಿತಿಗಳು ಮತ್ತು ಕಲಾವಿದರಿಗೆ ಮನವಿ ಮಾಡಲಾಗುತ್ತದೆ. ಮತ್ತೊಮ್ಮೆ ಸರ್ವಪಕ್ಷಗಳ ನಿಯೋಗ ಪ್ರಧಾನಿಗಳನ್ನು ಭೇಟಿ ಮಾಡಬೇಕು' ಎಂದು ವಾಟಾಳ್ ಒತ್ತಾಯಿಸಿದರು.[ಮಾತುಕತೆ ಮೂಲಕ ಮಹದಾಯಿ ವಿವಾದಕ್ಕೆ ತೆರೆ?]