ಪೊಲೀಸರ ಪ್ರತಿಭಟನೆಗೆ ಆರ್ಟಿಐ ಕಾರ್ಯಕರ್ತರ ಬೆಂಬಲ
ಬೆಂಗಳೂರು, ಹುಬ್ಬಳ್ಳಿ, ಮೇ 31: ಜೂನ್ 4 ರಂದು ನಡೆಯಲಿರುವ ಪೊಲೀಸರ ಪ್ರತಿಭಟನೆಗೆ ಆರ್ ಟಿಐ ಕಾರ್ಯಕರ್ತರು ಬೆಂಬಲ ನೀಡಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಪ್ರಶಾಂತಕುಮಾರ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜೂನ್ 4 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪದ್ಮನಾಭನಗರದಿಂದ ಮುಖ್ಯಮಂತ್ರಿ ನಿವಾಸದವರೆಗೂ ಬೈಕ್ ನಲ್ಲಿ ಮೆರವಣಿಗೆ ಸಾಗಲಾಗುವುದು ಎಂದರು. [ಪೊಲೀಸರ ಸಮಸ್ಯೆಗೆ ಕಿವಿಗೊಡಿ, ಸರ್ಕಾರಕ್ಕೆ ಆಪ್ ಸಲಹೆ]
ಸುಮಾರು 3 ದಶಕಗಳ ಕಾಲದಿಂದ ಪೊಲೀಸರ ನ್ಯಾಯಯುತ ಸಂವಿಧಾನಬದ್ಧ ಹಕ್ಕುಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ. ರಾಜ್ಯದಲ್ಲಿ ಸುಮಾರು 28 ಸಾವಿರ ಪೊಲೀಸ್ ಹುದ್ದೆಗಳು ಖಾಲಿಯಿವೆ ಈ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿಕೊಳ್ಳದೇ, ಈಗಾಗಲೇ ಇರುವ ಪೊಲೀಸ್ ಸಿಬ್ಬಂದಿಯಿಂದಲೇ ದುಡಿಸಿಕೊಳ್ಳುತ್ತಿರುವುದು ಅಮಾನವೀಯ ಕೃತ್ಯ ಎಂದು ಹೇಳಿದರು.
ಪೊಲೀಸರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯ ಮಾಡಿದರು. ಈ ಸಂದರ್ಭ ಧನಂಜಯ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.[ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]
ಪ್ರತಿಭಟನೆಯಲ್ಲಿ
ಪಾಲ್ಗೊಳ್ಳಬೇಡಿ:
ಹುಬ್ಬಳ್ಳಿ:
ಹುಬ್ಬಳ್ಳಿಯ
ಶಹರ
ಪೊಲೀಸ್
ಠಾಣೆಯಲ್ಲಿ
ಮಂಗಳವಾರ
ಹು-ಧಾ
ಮಹಾನಗರ
ಪೊಲೀಸ್
ಆಯುಕ್ತ
ಪಾಂಡುರಂಗ
ರಾಣೆ
ಜೂ.
4
ರಂದು
ಹಮ್ಮಿಕೊಂಡಿರುವ
ಪೊಲೀಸ್
ರ
ಮುಷ್ಕರದಲ್ಲಿ
ಪಾಲ್ಗೊಳ್ಳದಂತೆ
ಪೊಲೀಸ್
ಸಿಬ್ಬಂದಿಗೆ
ಸೂಚಿಸಿದರು.
ರಾಜ್ಯ
ಸರಕಾರ
ಪೊಲೀಸರ
ಬೇಡಿಕೆಗಳನ್ನು
ಶೀಘ್ರವಾಗಿ
ಈಡೇರಿಸುವುದಾಗಿ
ತಿಳಿಸಿದೆ
ಮತ್ತು
ಅದಕ್ಕೆ
ಬದ್ಧವಾಗಿ
ಎಂದು
ಪೊಲೀಸ್
ಕಮೀಷನರ್
ಹೇಳಿದರು.