ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ವಾಪಸ್
ಬೆಂಗಳೂರು, ಏ. 11 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ಸಂಜೆಯಿಂದ ಕರೆ ನೀಡಿದ್ದ ಮುಷ್ಕರವನ್ನು ಪೆಟ್ರೋಲ್ ಬಂಕ್ ಮಾಲೀಕರು ವಾಪಸ್ ಪಡೆದಿದ್ದಾರೆ. ಬಂಕ್ ಮಾಲೀಕರ ಬೇಡಿಕೆ ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಶನಿವಾರ
ಸಂಜೆ
6
ಗಂಟೆಯಿಂದ
ಭಾನುವಾರ
ಬೆಳಗ್ಗೆ
6
ಗಂಟೆಯ
ತನಕ
ತೈಲ
ಮಾರಾಟ
ಸ್ಥಗಿತಗೊಳಿಸಿ
ಮುಷ್ಕರ
ನಡೆಸುವುದಾಗಿ
ಪೆಟ್ರೋಲ್
ಬಂಕ್
ಮಾಲೀಕರು
ಹೇಳಿದ್ದರು.
ದೇಶಾದ್ಯಂತ
ಈ
ಮುಷ್ಕರಕ್ಕೆ
ಬೆಂಬಲ
ವ್ಯಕ್ತವಾಗಿತ್ತು.
ಕರ್ನಾಟಕದಲ್ಲಿಯೂ
ಬೆಂಬಲ
ದೊರಕಿತ್ತು.
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂಧ್ರ ಪ್ರಧಾನ್ ಶನಿವಾರ ಇಲಾಖೆಯ ಅಧಿಕಾರಿಗಳು, ತೈಲ ಮಾರಾಟಗಾರರ ಒಕ್ಕೂಟದ ಜೊತೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಏ.30ರೊಳಗೆ ಈಡೇಸಿರುವ ಭರವಸೆ ನೀಡಿದ್ದಾರೆ.[ಮಾಲೀಕರ ಮುಷ್ಕರ ಏಕೆ?]
ಕೇಂದ್ರ ಸಚಿವರಿಂದ ಭರವಸೆ ಸಿಕ್ಕಿರುವ ಹಿನ್ನಲೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ಪೆಟ್ರೋಲ್ ಬಂಕ್ ಬಂದ್ ಮಾಡಿ ನಡೆಸುವ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಪೆಟ್ರೋಲ್ ಬಂಕ್ಗಳು ರಾತ್ರಿಯೂ ಕಾರ್ಯನಿರ್ವಹಿಸಲಿವೆ. [ತೈಲ ಬೆಲೆ ನಿರಂತರ ಇಳಿಕೆಗೆ ನಿಜವಾದ ಕಾರಣವೇನು?]
ಡೀಸೆಲ್ ಮತ್ತು ಪೆಟ್ರೋಲ್ ಮಾರಾಟಗಾರರಿಗೆ ಶೇ.5ರಷ್ಟು ಲಾಭಾಂಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಮುಷ್ಕರ ನಡೆಸಲು ತೀರ್ಮಾನಿಸಲಾಗಿತ್ತು. ತೈಲ ಮಾರಾಟ ಮಾಡುವ ಡೀಲರ್ಗಳಿಗೆ ಒಂದು ವರ್ಷದಿಂದ ಲಾಂಭಶ ಹೆಚ್ಚಳ ಮಾಡಿಲ್ಲ ಎಂದು ತೈಲ ಮಾರಾಟಗಾರರು ಆರೋಪಿದ್ದರು.