ದಲಿತರಿಗೆ ಸಿಎಂ ಪಟ್ಟ, ಮೌನ ಮುರಿದ ಪರಮೇಶ್ವರ್!
ಬೆಂಗಳೂರು, ಫೆ. 21 : ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬೇಡಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮೌನ ಮುರಿದಿದ್ದಾರೆ. 'ನಾನು ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿಯಾಗಿದ್ದೇನೆ. ಚುನಾವಣೆಗೆ ಮೊದಲು ನಾನು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೆ ಎಂದು ಶನಿವಾರ ಅವರು ಹೇಳಿದ್ದಾರೆ.
ಶನಿವಾರ
ಬೆಂಗಳೂರಿನಲ್ಲಿ
ಮಾಧ್ಯಮಗಳೊಂದಿಗೆ
ಮಾತನಾಡಿದ
ಪರಮೇಶ್ವರ
ಅವರು
'ದಲಿತರಿಗೆ
ಸಿಎಂ
ಸ್ಥಾನ
ನೀಡಿದರೆ
ತಪ್ಪೇನಿದೆ
ಎಂದು
ಪ್ರಶ್ನಿಸಿದರು.
ದಲಿತ
ಸಿಎಂ
ಸ್ಥಾನದ
ಬೇಡಿಕೆ
ಇಟ್ಟಿರುವುದು
ಪಕ್ಷದವರಲ್ಲ.
ಆದ್ದರಿಂದ
ಆ
ಬಗ್ಗೆ
ನಾನು
ಪ್ರತಿಕ್ರಿಯೆ
ನೀಡುವುದಿಲ್ಲ'
ಎಂದು
ಸ್ಪಷ್ಟಪಡಿಸಿದರು.
[ದಲಿತರು
ಮುಖ್ಯಮಂತ್ರಿಯಾಗಲು
ಇದು
ಸಕಾಲವಲ್ಲ]
'ವಿಧಾನಸಭೆ ಚುನಾವಣೆಗೆ ಮೊದಲು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೆ ಎಂದು ಹೇಳಿದ ಪರಮೇಶ್ವರ ಅವರು, ಈಗಲೂ ಮುಖ್ಯಮಂತ್ರಿ ಹುದ್ದೆಗೇರಲು ನಾನು ಅರ್ಹನಾಗಿದ್ದೇನೆ' ಎಂದರು. [ದಲಿತರಿಗೆ ಸಿಎಂ ಸ್ಥಾನ, ಸಿಎಂ ಸಿದ್ದರಾಮಯ್ಯ ಹೇಳುವುದೇನು?]
'ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರಲ್ಲಿ ತಪ್ಪೇನಿದೆ?' ಎಂದ ಅವರು ಕಾಲ ಬಂದಾಗ ದಲಿತರು ಸಹ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ದಲಿತ ಮುಖಂಡರ ಸಭೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. [ದಲಿತರಿಗೆ ಸಿಎಂ ಪಟ್ಟ, ಕಾಂಗ್ರೆಸ್ ನಾಯಕರು ಹೇಳುವುದೇನು?]
ಮುಖಂಡರ ಪ್ರತಿಕಾಗೋಷ್ಠಿ : ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ಸೇರಿ ಪರಮೇಶ್ವರ ಅವರನ್ನು ಸಿಎಂ ಮಾಡುವಂತೆ ಬೇಡಿಕೆ ಇಟ್ಟಿದ್ದ ದಲಿತ ಸಂಘಟನೆಗಳ ಪ್ರಮುಖ ನಾಯಕರು, ಇಂದು ಪ್ರತಿಕಾಗೋಷ್ಠಿ ನಡೆಸಿ ತಮ್ಮ ಬೇಡಿಕೆಗೆ ತಾವು ಬದ್ಧವಾಗಿದ್ದೇವೆ, ದಲಿತರಿಗೆ ಸಿಎಂ ಸ್ಥಾನ ದೊರೆಯಬೇಕು ಎಂದು ಪುನಃ ಹೇಳಿದ್ದಾರೆ.