ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ ಯೂಸ್ಲೆಸ್ ನಟ ಅನ್ನೋಕೆ ಎಷ್ಟು ಧೈರ್ಯ ಇವನಿಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್. 22: 'ಇದೊಂದು ಉಪಯೋಗವಿಲ್ಲದ ನಗರ, ಇಲ್ಲಿರುವವರು ಪ್ರಯೋಜನಕ್ಕೆ ಬಾರದ ಕನ್ನಡಿಗರು, ಇಡೀ ನಗರವನ್ನು ನಟನೊಬ್ಬ ಹಾಳು ಮಾಡಿದ್ದಾರೆ. ಅವರ ಹೆಸರನ್ನು ನಾನು ಹೇಳಲ್ಲ, ಆದರೆ ವೀರಪ್ಪನ್ ಅಪಹರಣ ಮಾಡಿದ್ದ ವ್ಯಕ್ತಿ ಎಂದಷ್ಟೇ ಹೇಳಬಲ್ಲೆ'

ಕನ್ನಡಿಗರಿಗೆ, ಬೆಂಗಳೂರಿಗರಿಗೆ ಅವಮಾನಕಾರಿಯಾದ ಫೇಸ್ ಬುಕ್ ಪೋಸ್ಟ್ ವೊಂದು ಹರಿದಾಡುತ್ತಿದೆ. ಇಂಥ ಪೋಸ್ಟ್ ಹಾಕಿದ ರವಿ ಕಾಟರುಕಾ ಎಂಬಾತನಿಗೆ ಕಮೆಂಟ್ ಗಳ ಮೂಲಕ ಕನ್ನಡಿಗರು ಸರಿಯಾಗೇ ಕಟುಕಿದ್ದಾರೆ.[ಡಾ.ರಾಜ್ ಪ್ರತಿಮೆ ಸ್ಥಾಪಿಸಿದವರೆ ಬೆಂಕಿ ಇಟ್ಟರುǃ]

facebook

ಕನ್ನಡಿಗರ ಅಭಿಮಾನ ಕೆಣಕಿದ ರವಿಗೆ ಶಿಕ್ಷೆ ಆಗುವವರೆಗೂ ಈ ಪೋಸ್ಟ್ ಶೇರ್ ಮಾಡಿ ಎಂದು ಮನವಿ ಮಾಡಿಕೊಳ್ಳಲಾಗಿದೆ. ನೀವು ಈ 'ಮಹಾತ್ಮ' ನ ಪ್ರೋಫೈಲ್ ಗೆ ಹೋದರೆ ಯಾವ ಅಪ್ ಡೇಟ್ಸ್ ಗಳು ಸಿಗುತ್ತಿಲ್ಲ. ಆತನ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಈತ ಹಾಕಿರುವ ಪೋಸ್ಟ್ ಗೆ ಕನ್ನಡಿಗರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಈ ಪೋಸ್ಟ್ 934 ಷೇರ್ ಗಳನ್ನು ಪಡೆದುಕೊಂಡಿದೆ.

'ಸೆ ನೋ ಟು ಕನ್ನಡ ಎಂಬ ಪೇಜ್' ಕ್ರಿಯೆಟ್ ಮಾಡಿ ಕನ್ನಡಿಗರಿಂದ ಮಾನ ಕಳೆದುಕೊಂಡಿದ್ದವರ ತಂಡಕ್ಕೆ ಈತನೂ ಸೇರಿದವನೇ ಎಂಬ ಪ್ರಶ್ನೆಯೂ ಮೂಡಿದೆ. ಈತನ ಮೇಲೆ ಪೊಲೀಸರಿಗೆ ದೂರು ನೀಡಲಾಗಿದ್ದು ಶಿಕ್ಷೆಯಾಗುಗವವರೆಗೂ ಬಿಡಬಾರದು ಎಂದು ಕನ್ನಡಿಗರು ಒತ್ತಾಯ ಮಾಡಿದ್ದಾರೆ.

ಕನ್ನಡಿಗರ ಕೋಪಕ್ಕೆ ಗುರಿಯಾದವನಿಗೆ ಕೊಟ್ಟ ಕಮೆಂಟ್ ಗಳು

English summary
A North Indian insults Rajkumar and Kannada on Facebook post. 'This is a useless city full of useless Kannadigas and more than a city spoiled by some useless actor' A North Indian named Ravi Kataruka posted on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X