ಕಂಬಳದ ಪರ ನಿಂತ ಸರ್ಕಾರ, ಕೇಂದ್ರಕ್ಕೆ ಪತ್ರ
ಬೆಂಗಳೂರು. 21 : ಉಡುಪಿ-ಮಂಗಳೂರು ಭಾಗದ ಜಾನಪದ ಕ್ರೀಡೆ ಕಂಬಳಕ್ಕೆ ನಿಷೇಧ ಹೇರುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕಂಬಳದೊಂದಿಗೆ ಸ್ಥಳೀಯ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ.
ವಿಧಾನಸೌಧದಲ್ಲಿ
ಗುರುವಾರ
ಕಾನೂನು
ಮತ್ತು
ಸಂಸದೀಯ
ವ್ಯವಹಾರ
ಸಚಿವ
ಸಚಿವ
ಟಿ.ಬಿ.ಜಯಚಂದ್ರ
ಅವರ
ಅಧ್ಯಕ್ಷತೆಯಲ್ಲಿ
ಕರಾವಳಿ
ಭಾಗದ
ಜನಪ್ರತಿನಿಧಿಗಳ
ಸಭೆ
ನಡೆಯಿತು.
ಸಭೆಯಲ್ಲಿ
ಕಂಬಳಕ್ಕೆ
ನಿಷೇಧ
ಹೇರದಂತೆ
ಕೇಂದ್ರ
ಸರ್ಕಾರಕ್ಕೆ
ಮನವಿ
ಮಾಡಲು
ತೀರ್ಮಾನ
ಕೈಗೊಳ್ಳಲಾಗಿದೆ.
[ಉಡುಪಿಯಲ್ಲಿ
ಕಂಬಳ
ನಿಷೇಧ]
ಕರ್ನಾಟಕ ಸರ್ಕಾರ ಕಂಬಳ ನಿಷೇಧ ಮಾಡದಂತೆ ಕೋರಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಷ್ಟ್ರೀಯ ಪಶು ಕಲ್ಯಾಣ ಸಂಸ್ಥೆಗೆ ಪತ್ರ ಬರೆಯಲು ತೀರ್ಮಾನಿಸಿದೆ. ಅಗತ್ಯಬಿದ್ದರೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಟಿ.ಬಿ.ಜಯಚಂದ್ರ ಅವರು, ಜನಪ್ರತಿನಿಧಿಗಳ ನಿಯೋಗಕ್ಕೆ ಭರವಸೆ ನೀಡಿದ್ದಾರೆ. [ಇತಿಹಾಸದ ಪುಟ ಸೇರಲಿದೆಯೆ ಮಂಗಳೂರು ಕಂಬಳ?]
ಕರಾವಳಿ ಭಾಗದ ಜನರು ಕಂಬಳವನ್ನು ವ್ಯಾಪಾರದ ಉದ್ದೇಶದಿಂದ ನಡೆಸುತ್ತಿಲ್ಲ. ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ಕ್ರೀಡೆ ಇದಾಗಿದ್ದು, ಇದರೊಂದಿಗೆ ಸ್ಥಳೀಯ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಸಭೆಯಲ್ಲಿ ಕರಾವಳಿ ಭಾಗದ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಬಳದ ಕೋಣಗಳಿಗೆ ಜನರು ಹಿಂಸೆ ಮಾಡುವುದಿಲ್ಲ. ಪ್ರೀತಿಯಿಂದ ಅವುಗಳನ್ನು ಸಾಕುತ್ತಾರೆ. ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ವ್ಯಾಪ್ತಿಗೆ ಕೋಣಗಳು ಬರುವುದಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ಕೇಂದ್ರದ ಮನವೊಲಿಕೆಗೆ ತೀರ್ಮಾನಿಸಲಾಗಿದೆ.
ಕಂಬಳಕ್ಕೆ ನಿಷೇಧ ಹೇರದಂತೆ ಕೇಂದ್ರ ಸರ್ಕಾರದ ಮನವೊಲಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಕಾನೂನು ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ರಮಾನಾಥ್ ರೈ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ನಿಷೇಧಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ನ.15ರಿಂದ ನಡೆಯಬೇಕಾಗಿದ್ದ ಎಲ್ಲಾ ಕಂಬಳವನ್ನು ಸುಪ್ರೀಂಕೋರ್ಟ್ ಆದೇಶ ಮತ್ತು ರಾಜ್ಯ ಸರ್ಕಾರ ನಿರ್ದೇಶನದ ಅನ್ವಯ ನಿಷೇಧಿಸಲಾಗಿತ್ತು, ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.