ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮಿನರಲ್ಸ್ ಹಗರಣ, ಮಹೇಂದ್ರ ಜೈನ್ ಗೆ ಜಾಮೀನು

|
Google Oneindia Kannada News

ಬೆಂಗಳೂರು, ಆ.4 : ಮೈಸೂರು ಮಿನರಲ್ಸ್ ಕಂಪನಿಗೆ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಕಂಪನಿಗೆ 300ಕೋಟಿ ರೂ. ನಷ್ಟ ಉಂಟುಮಾಡಿದ ಪ್ರಕರಣವಿದಾಗಿದೆ.

ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಮತ್ತು ಇತರ ನಾಲ್ಕು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ. ನಾಲ್ವರು ಆರೋಪಿಗಳು ಹೈಕೋರ್ಟ್ ಗೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದರು.

Mysore Minerals Ltd corruption case, HC grants bail to IAS officer Mahendra Jain

ಮಹೇಂದ್ರ ಜೈನ್ 2006-08ರ ಅವಧಿಯಲ್ಲಿ ಮೈಸೂರು ಮಿನರಲ್ಸ್ ವ್ಯಕವಸ್ಥಾಪಕ ನಿರ್ದೇಶಕರಾಗಿದ್ದರು. ಈ ಅವಧಿಯಲ್ಲಿ ನಡೆದ ಅದಿರು ಸಾಗಣೆ ಹಗರಣದಲ್ಲಿ ಅವರಿಂದ ಬೊಕ್ಕಸಕ್ಕೆ 300 ಕೋಟಿ ನಷ್ಟ ಉಂಟಾಗಿದೆ. ಲೋಕಾಯುಕ್ತ ಎಸ್ಐಟಿ ಈ ಹಗರಣದ ತನಿಖೆ ನಡೆಸುತ್ತಿದೆ.

ಮಹೇಂದ್ರ ಜೈನ್, ಡಾ.ಡಿ.ಎಸ್.ಅಶ್ವಥ್, ಶಂಕರಲಿಂಗಯ್ಯ ಮತ್ತು ಕೆ.ಶ್ರೀನಿವಾಸ್ ಈ ಪ್ರಕರಣದ ಆರೋಪಿಗಳು. ಕಂಪನಿಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬುದಕ್ಕೆ ಗಣಿತದ ತಪ್ಪು ಲೆಕ್ಕವೇ ಕಾರಣ ಎಂದು ಜೈನ್ ಹಿಂದೊಮ್ಮೆ ಹೇಳಿದ್ದರು.

English summary
The High Court of Karnataka granted bail to senior IAS officer Mahendra Jain in the case of alleged corruption causing loss to State-owned mining company Mysore Minerals Ltd. (MML) during 2006–08.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X