ಮದ್ದೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು
ಮಂಡ್ಯ, ಜೂ. 26 : ಕಬ್ಬು ಬೆಳೆಗಾರರಿಗೆ ಬಾಕಿ ಕೊಡಿಸುವಲ್ಲಿ ವಿಫಲವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪದ ದೂರು ದಾಖಲಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ರೈತ ಸಂಘದ ಕಾರ್ಯಕರ್ತರು ಈ ದೂರನ್ನು ಶುಕ್ರವಾರ ದಾಖಲು ಮಾಡಿದ್ದಾರೆ.
ಮಂಡ್ಯ
ಜಿಲ್ಲೆಯ
ರೈತ
ಸಂಘದ
ಮುಖಂಡ
ಜಿ.ಶಂಕರ್
ಇಂದು
ಮದ್ದೂರು
ಪೊಲೀಸ್
ಠಾಣೆಯಲ್ಲಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ವಿರುದ್ಧ
ದೂರು
ಸಲ್ಲಿಸಿದ್ದಾರೆ.
ಕಬ್ಬು
ಬೆಳೆಗಾರರ
ಬೇಡಿಕೆಯನ್ನು
ಸರ್ಕಾರ
ಈಡೇರಿಸುತ್ತಿಲ್ಲ,
ಸಕ್ಕರೆ
ಕಾರ್ಖಾನೆಗಳಿಂದ
ರೈತರಿಗೆ
ಬಾಕಿ
ಪಾವತಿಯಾಗುತ್ತಿಲ್ಲ
ಎಂದು
ದೂರಿನಲ್ಲಿ
ತಿಳಿಸಲಾಗಿದೆ.
[ಕಬ್ಬಿನ
ಗದ್ದೆಗೆ
ಬೆಂಕಿ
ಹಾಕಿ
ಸಾವಿಗೆ
ಶರಣಾದ
ರೈತ]
ಬಾಕಿ ಹಣ ಪಾವತಿಯಾಗದ ಕಾರಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕನಿಷ್ಠ ಪರಿಹಾರವನ್ನು ವಿತರಣೆ ಮಾಡದ ಸರ್ಕಾರ ರೈತರ ಸಾವಿಗೆ ನೇರ ಹೊಣೆ ಎಂದು ದೂರಿನಲ್ಲಿ ವಿವರಣೆ ನೀಡಲಾಗಿದೆ. [ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ :ಎಚ್ಡಿಕೆ]
ರೈತ ಆತ್ಮಹತ್ಯೆಗೆ ಶರಣಾಗಿದ್ದ : ಕಾರ್ಖನೆಯಿಂದ ಬರಬೇಕಾದ ಬಾಕಿ ಹಣ ಬಾರದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರಿನ ನಿವಾಸಿಯಾಗಿರುವ ನಿಂಗೇಗೌಡ ಎಂಬ ರೈತ ಗುರುವಾರ ಕಬ್ಬಿನ ಬೆಳೆಗೆ ಬೆಂಕಿ ಹಾಕಿ, ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ನಂತರ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಕೆ ಮಾಡಲಾಗಿದೆ.
ವಿವಿಧ ನಾಯಕರ ಭೇಟಿ : ಮಂಡ್ಯದಲ್ಲಿ ಗುರುವಾರ ಆತ್ಮಹತ್ಯೆಗೆ ಶರಣಾದ ರೈತ ನಿಂಗೇಗೌಡ ಮನೆಗೆ ಶುಕ್ರವಾರ ವಿವಿಧ ರಾಜಕೀಯ ನಾಯಕರು ಭೇಟಿ ನೀಡಿದರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ದೇವೇಗೌಡ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ನಿಂಗೇಗೌಡ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮನೆ ನಿರ್ಮಿಸಿಕೊಡುವ ಭರವಸೆ : ನಿಂಗೇಗೌಡ ಕಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದ ಸಚಿವ ಅಂಬರೀಶ್, 'ನಿಂಗೇಗೌಡರ ಸಾವು ಕೇವಲ ಒಬ್ಬ ರೈತನ ಸಾವಲ್ಲ, ದೇಶದಲ್ಲಿನ ರೈತರ ಸ್ಥಿತಿಗೆ ಹಿಡಿದ ಕೈಗನ್ನಡಿ ಇದು. ಹೆಣವಿಟ್ಟು ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ, ಕುಟುಂಬಕ್ಕೆ ಧೈರ್ಯ ತುಂಬಲು ಬಂದಿದ್ದೇನೆ' ಎಂದು ಹೇಳಿದರು.
'ನಿಂಗೇಗೌಡರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ವಸತಿ ಇಲಾಖೆಯಿಂದ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೇನೆ' ಎಂದು ತಿಳಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಿಂಗೇಗೌಡ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದರು.