ಕರಾವಳಿ ಬಂದರಿಗೆ ಬೊಂಬಾಟ್ ಬೂತಾಯಿ!
ಮಂಗಳೂರು, ಜೂನ್ 11 : ಒಂದೆಡೆ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಾರಲಾಗಿದೆ. ಮತ್ತೊಂದೆಡೆ ನಾಡದೋಣಿಗಳು ತೂಫಾನ್ಗಾಗಿ ಕಾದು ಕೂತಿದೆ. ಇವುಗಳ ಜತೆಯಲ್ಲಿ ಬಂದರಿಗೆ ಬೂತಾಯಿ ಮೀನುಗಳು ಭರ್ಜರಿಯಾಗಿ ಬರುತ್ತಿವೆ.
ಈ
ವರ್ಷದ
ಮೀನುಗಾರಿಕಾ
ವರ್ಷದಲ್ಲಿ
ಬೂತಾಯಿ
ಮೀನು
ಸಾಕಷ್ಟು
ಕಡಿಮೆ
ಪ್ರಮಾಣದಲ್ಲಿ
ಕರಾವಳಿಯ
ಮೀನುಗಾರರಿಗೆ
ದೊರಕಿತ್ತು.
ಇದರಿಂದಾಗಿ
ಓಮನ್
ದೇಶದ
ಬೂತಾಯಿಗಳು
ಗುಜರಾತ್
ಬಂದರಿನ
ಮೂಲಕ
ಕರಾವಳಿ
ಬಂದರಿಗೆ
ಬರುತ್ತಿದ್ದವು.[ಕರಾವಳಿಗೆ
ಬಂತು
ಒಮಾನ್
ಬೂತಾಯಿ
ಮೀನು!]
ಮೀನುಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ 2014-15 ರಲ್ಲಿ 26034 ಸಾವಿರ ಟನ್ ಬೂತಾಯಿಗಳನ್ನು ಹಿಡಿಯಲಾಗಿತ್ತು. ಅದೇ 2015-16 ರಲ್ಲಿ 10644 ಸಾವಿರ ಟನ್ ಮೀನುಗಳನ್ನು ಹಿಡಿಯಲಾಗಿತ್ತು. ಈ ಎಲ್ಲ ಲೆಕ್ಕಾಚಾರದ ಪ್ರಕಾರ ಈ ವರ್ಷ ಬೂತಾಯಿ ಮೀನುಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿತ್ತು. [ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]
'ಕರಾವಳಿಯ ಬಂದರಿನಲ್ಲಿ ಬೂತಾಯಿ ಹಾಗೂ ಬಂಗುಡೆ ಈ ಹಿಂದೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮೀನುಗಾರರಿಗೆ ದೊರಕುತ್ತಿತ್ತು' ಎನ್ನುವುದು ಮಂಗಳೂರು ಮೀನುಗಾರಿಕಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಗಣೇಶನ್ ಅವರ ಮಾತು. [ಉಡುಪಿಯಲ್ಲಿ ಗಗನಕ್ಕೇರಿದ ಮೀನಿನ ಬೆಲೆ]
ನೆರೆರಾಜ್ಯಗಳ ಬೂತಾಯಿ : ಕರಾವಳಿಯ ಬಂದರುಗಳಿಗೆ ಇಲ್ಲಿಯ ವರೆಗೆ ಓಮನ್ ದೇಶದಿಂದ ಬೂತಾಯಿಗಳು ಬರುತ್ತಿತ್ತು. ದೊಡ್ಡ ಗಾತ್ರದ ಓಮನ್ ಮೀನುಗಳಿಗೆ ಕೆಜಿ ಯೊಂದಕ್ಕೆ ಭರ್ತಿ 130 ರಿಂದ 140ರ ವರೆಗೆ ದರವಿತ್ತು.
ಈಗ ಕೇರಳ, ಮದ್ರಾಸ್ ಹಾಗೂ ಆಂಧ್ರದಿಂದ ಮೀನುಗಳು ಬರುತ್ತಿವೆ. ಈ ಸಮಯದಲ್ಲಿ ಅವರಿಗೆ ಮೀನುಗಾರಿಕೆಗೆ ಅವಕಾಶವಿದೆ. ವಿಶೇಷವಾಗಿ ಬೂತಾಯಿ ಬಾಕ್ಸ್ ರೂಪದಲ್ಲಿ ಅಂದರೆ 40 ಕೆಜಿ ಬೂತಾಯಿ 3 ಸಾವಿರಕ್ಕೆ ಮಾರಾಟವಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಈ ದರಗಳಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.
ತೂಫಾನ್ ಬಂದಿಲ್ಲ : ತೂಫಾನ್ ಬಂದ ನಂತರ ನಾಡ ದೋಣಿ ಮೀನುಗಾರಿಕೆ ಆರಂಭವಾಗುತ್ತದೆ. ಈ ಬಾರಿಯ ತೂಫಾನ್ ಇನ್ನೂ ಕೂಡಾ ಸರಿಯಾಗಿ ನಿಗದಿಯಾಗಿಲ್ಲ. ಜೂನ್ ತಿಂಗಳ ಕೊನೆ ಭಾಗದಲ್ಲಿ ತೂಫಾನ್ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನಾಡಡೋಣಿ ಮೀನುಗಾರಿಕೆ ಆರಂಭವಾದ ನಂತರ ಕರಾವಳಿಯ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.