ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ
ಕೊಡಗು, ಜೂನ್ 30 : ಕೊಡಗಿನಲ್ಲಿ ಆರಿದ್ರ ಮಳೆಯ ಆರ್ಭಟ ಮುಂದುವರೆದಿದ್ದು, ಕಾವೇರಿ ನದಿ ಸೇರಿದಂತೆ ಜಿಲ್ಲೆಯಾದ್ಯಂತ ನದಿಗಳು ಪ್ರವಾಹದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾಗಮಂಡಲದಲ್ಲಿ
ತ್ರಿವೇಣಿ
ಸಂಗಮ
ಮುಳುಗಡೆಗೊಂಡಿದ್ದರಿಂದ
ಭಾಗಮಂಡಲ-ಮಡಿಕೇರಿ-
ನಾಪೋಕ್ಲು
ರಸ್ತೆ
ಸಂಚಾರ
ಸ್ಥಗಿತಗೊಂಡು
ಜನಜೀವನ
ಅಸ್ತವ್ಯಸ್ತಗೊಂಡಿದೆ.
ಕೊಡಗಿನ
ವಿವಿಧೆಡೆಗಳಲ್ಲಿ
ರಸ್ತೆಗಳು,
ಮನೆಗಳು,
ರಕ್ಷಣಾ
ಗೋಡೆಗಳು,
ಮರಗಿಡಗಳು,
ವಿದ್ಯುತ್
ಕಂಬಗಳು
ಉರುಳಿ
ಬಿದ್ದಿದ್ದರಿಂದ
ಭಾರೀ
ಹಾನಿ
ಉಂಟಾಗಿದೆ.
[ಮಳೆಗಾಲದ
ಅತಿಥಿಯಾಗಿ
ಬಂದ
ಹೆಬ್ಬಾವು!]
ಮಲ್ಲಿಕಾರ್ಜುನ ನಗರದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿರುವ ದಿವಾಕರ್ ಎಂಬವರ ಮನೆಯ ಹಿಂಭಾಗದ ಅಡುಗೆ ಕೋಣೆ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಮುಂಡೇಶ್ವರಿ ನಗರದ ನಿವಾಸಿ ನಾಗಮ್ಮ ಎಂಬವರ ಹಳೆಯ ಮನೆ ಕುಸಿದುಬಿದ್ದಿದೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]
ಇದೇ
ನಗರದಲ್ಲಿ
ಸಮುದಾಯ
ಭವನದ
ಬಳಿ
ತಡೆಗೋಡೆ
ಕುಸಿದಿದೆ.
ಓಂಕಾರೇಶ್ವರ
ದೇವಾಲಯದ
ರೆಡ್
ಫರ್ನ್
ಹೋಟೆಲ್
ಬಳಿ
ತಡೆಗೋಡೆ
ಹಾಗೂ
ರಾಜಸೀಟಿನ
ಕೆಳಗಿನ
ರಸ್ತೆಯಲ್ಲಿ
ರಾಜ್
ದರ್ಶನ
ಹೋಟೇಲ್
ಮಾಲೀಕರ
ಮನೆಯ
ತಡೆಗೋಡೆ
ಕುಸಿದುದರಿಂದ
ರಸ್ತೆ
ಸಂಚಾರ
ಅಸ್ತವ್ಯಸ್ತಗೊಂಡಿದೆ.