ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆಯ ನಡುವೆ ಸಾಮ್ಯತೆ?
ಬೆಂಗಳೂರು, ಸೆಪ್ಟೆಂಬರ್, 03 : ಪ್ರೊ.ಎಂ.ಎಂ.ಕಲಬುರ್ಗಿ ಅವರನ್ನು ಕೊಂದವರು ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಅಲ್ಲಿನ ಪೊಲೀಸರ ಜೊತೆ ಸೇರಿಕೊಂಡು ತನಿಖೆ ಆರಂಭಿಸಿದ್ದಾರೆ.
ನರೇಂದ್ರ
ದಾಭೋಲ್ಕರ್,
ಗೋವಿಂದ
ಪನ್ಸಾರೆ
ಅವರ
ಹತ್ಯೆಯಂತೆ
ಎಂ.ಎಂ.ಕಲಬುರ್ಗಿ
ಅವರ
ಹತ್ಯೆ
ನಡೆದಿರಬಹುದು
ಎಂಬ
ಶಂಕೆಯ
ಹಿನ್ನೆಲೆಯಲ್ಲಿ
ಮಹಾರಾಷ್ಟ್ರದಲ್ಲಿ
ತನಿಖೆ
ನಡೆಸಲಾಗುತ್ತಿದೆ.
ಎರಡೂ
ರಾಜ್ಯಗಳ
ಪೊಲೀಸರು
ಜಂಟಿಯಾಗಿ
ತನಿಖೆ
ನಡೆಸುವುದಿಲ್ಲ.
ಆದರೆ,
ಮಾಹಿತಿಗಳನ್ನು
ಮಾತ್ರ
ವಿನಿಮಯ
ಮಾಡಿಕೊಳ್ಳಲಿದ್ದಾರೆ.
[ಕಲಬುರ್ಗಿ
ಹತ್ಯೆ,
ಶಂಕಿತರ
ರೇಖಾಚಿತ್ರ
ಬಿಡುಗಡೆ]
ಮೂರು ಹತ್ಯೆ ಪ್ರಕರಣಗಳಿಗೂ ಸಾಮ್ಯತೆ ಇದೆ. ಆದರೆ, ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹತ್ಯೆ ಮಾಡಿದವರೇ ಎಂ.ಎಂ.ಕಲಬುರ್ಗಿ ಅವರನ್ನು ಕೊಂದಿರಬಹುದು ಎಂಬುದು ಎಂದು ದೃಢಪಟ್ಟಿಲ್ಲ ಎಂದು ಸಿಐಡಿ ಅಧಿಕಾರಿಗಳಿ ಒನ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ. [ಕಲಬುರ್ಗಿ ಅವರ ಮೇಲೆ ದಾಳಿ ನಡೆದದ್ದು ಹೇಗೆ?]
ಸಾಕ್ಷಿಗೆ ಬೆದರಿಕೆ : ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಆರೋಪಿಗಳು ಪಕ್ಕದ ಮನೆಯವರಿಗೆ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ. ಕಲಬುರ್ಗಿ ಅವರ ಮನೆಯ ಮುಂದೆ ಗುಂಡಿನ ಶಬ್ದ ಕೇಳಿದ ತಕ್ಷಣ ಪಕ್ಕದ ಮನೆಯವರು ಹೊರಗೆ ಬಂದಿದ್ದರು. ಆದರೆ, ದುಷ್ಕರ್ಮಿಗಳು ಒಳ ಹೋಗುವಂತೆ ಅವರಿಗೆ ಬೆದರಿಕೆ ಹಾಕಿದರು ಎಂದು ತನಿಖೆ ವೇಳೆ ಅವರು ತಿಳಿಸಿದ್ದಾರೆ. [ದಾಭೋಲ್ಕರ್ ಕೊಂದವರು ಯಾರು?]
ಹತ್ಯೆ ಬಳಿಕ ಇಬ್ಬರು ಯುವಕರು ಬೈಕ್ನಲ್ಲಿ ಪರಾರಿಯಾದರು ಎಂದು ಕಲಬುರ್ಗಿ ಅವರ ಪಕ್ಕದ ಮನೆಯವರು ಸಿಐಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿಯಲ್ಲಿಯೂ ಬೈಕ್ನಲ್ಲಿ ಪರಾರಿಯಾಗಿರುವ ದೃಶ್ಯ ಸೆರೆಯಾಗಿದೆ.
ಸಿಬಿಐ ತನಿಖೆ : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಸರ್ಕಾರ ಈ ಕುರಿತು ಸಿಬಿಐಗೆ ಪತ್ರ ಬರೆಯುವ ಸಾಧ್ಯತೆ ಇದೆ.