ಮೇಕೆದಾಟು ಯೋಜನೆ : ಏ.22ಕ್ಕೆ ಮೋದಿ, ಸಿದ್ದರಾಮಯ್ಯ ಭೇಟಿ
ಬೆಂಗಳೂರು, ಏ. 17 : ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.22ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಸರ್ವಪಕ್ಷದ ನಿಯೋಗದೊಂದಿಗೆ ಪ್ರಧಾನಿ ಭೇಟಿಯಾಗುವ ಸಾಧ್ಯತೆ ಇದೆ.
ಪ್ರಧಾನಿ
ನರೇಂದ್ರ
ಮೋದಿ
ಅವರ
ಭೇಟಿಗೆ
ಕಾಲವಕಾಶ
ಕೋರಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಪತ್ರ
ಬರೆದಿದ್ದಾರೆ.
ಮೇಕೆದಾಟು
ಯೋಜನೆಯನ್ನು
ಕರ್ನಾಟಕ
ಏಕೆ
ಅನುಷ್ಠಾನಗೊಳಿಸಲು
ಉದ್ದೇಶಿಸುತ್ತಿದೆ
ಎಂದು
ಮೋದಿ
ಅವರಿಗೆ
ಮುಖ್ಯಮಂತ್ರಿಗಳು
ಮನವರಿಕೆ
ಮಾಡಿಕೊಡಲಿದ್ದಾರೆ.[ಕರ್ನಾಟಕ
ಬಂದ್
:
ಕ್ಷಣ-ಕ್ಷಣದ
ಮಾಹಿತಿ]
ಮೇಕೆದಾಟಯವಿನಲ್ಲಿ ಕಾನೂನು ಚೌಕಟ್ಟಿನಲ್ಲಿ ಅಣೆಕಟ್ಟು ನಿರ್ಮಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಅಗತ್ಯವಿದ್ದರೆ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದ್ದಾರೆ. [ಮೇಕೆದಾಟು ಯೋಜನೆ ವಿವಾದವೇನು?]
ಯೋಜನಾ ವರದಿ ಸಿದ್ಧಗೊಂಡಿಲ್ಲ : ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಮಾತ್ರ ಕರ್ನಾಟಕ ಸರ್ಕಾರದ ಮುಂದಿದೆ. ಈ ಯೋಜನೆಯ ಯೋಜನವಾ ವರದಿ ಇನ್ನೂ ಸಿದ್ಧಗೊಂಡಿಲ್ಲ. ಕೇಂದ್ರ ಪರಿಸರ ಸೇರಿದಂತೆ ವಿವಿಧ ಇಲಾಖೆಗಳಿಗೆ ಇನ್ನೂ ಕರ್ನಾಟಕ ಮನವಿ ಮಾಡಿಲ್ಲ. [ಕೃಷ್ಣಾ ನದಿ ಬತ್ತಿದಾಗ ಕರ್ನಾಟಕ ಬಂದ್ ಯಾಕ ಮಾಡಲಿಲ್ಲಾ?]