ಪೊಲೀಸರ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ
ಬೆಂಗಳೂರು, ಜೂನ್ 04 : ಇತಿಹಾಸದಲ್ಲೇ ಮೊದಲ ಬಾರಿಗೆ ಸಾಮೂಹಿಕ ರಜೆ ಹಾಕಿ ಕರ್ನಾಟಕದ ಪೊಲೀಸರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪ್ರತಿಭಟನೆ ನಡೆಸದಂತೆ ಸರ್ಕಾರ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಪ್ರತಿಭಟನೆ ನಡೆಸುವವರನ್ಪೊನು ವಜಾಗೊಳಿಸುವುದಾಗಿ ಹೇಳಿದೆ. ಪೊಲೀಸರ ಪ್ರತಿಭಟನೆಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಅಖಿಲ
ಕರ್ನಾಟಕ
ಪೊಲೀಸ್
ಮಹಾಸಂಘ
ಜೂನ್
4ರಂದು
ವಿವಿಧ
ಬೇಡಿಕೆಗಳ
ಈಡೇರಿಕೆಗೆ
ಆಗ್ರಹಿಸಿ
ಪ್ರತಿಭಟನೆಗೆ
ಕರೆ
ನೀಡಿದೆ.
ಪೊಲೀಸರ
ಪ್ರತಿಭಟನೆ
ತಡೆಯಲು
ಸರ್ಕಾರ
ಎಸ್ಮಾ
ಕಾಯ್ದೆ
ಜಾರಿಗೆ
ತಂದಿದೆ.
ಮಹಾಸಂಘದ
ಅಧ್ಯಕ್ಷ
ಶಶಿಧರ್
ವೇಣುಗೋಪಾಲ್
ಅವರನ್ನು
ಗುರುವಾರವೇ
ಬಂಧಿಸಲಾಗಿದೆ.
[ಪೊಲೀಸರ
31
ಬೇಡಿಕೆಗಳು]
ಪೊಲೀಸರು ಪ್ರತಿಭಟನೆ ನಡೆಸಲಿರುವ ಹಿನ್ನಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಇಂಡೋ ಟಿಬೆಟನ್ ಗಡಿ ಪೊಲೀಸ್ ಪಡೆಗೆ ಸೇರಿದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. [ಎಸ್ಮಾ ಎಂದರೇನು?]
*
ಧಾರವಾಡದಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಮಾಜಿ
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ಅವರು,
'ಸರ್ಕಾರ
ಸರ್ಕಾರ
ಪೊಲೀಸರ
ಮೇಲೆ
ಬ್ರಹ್ಮಾಸ್ತ್ರ
ಪ್ರಯೋಗಿಸುತ್ತಿದೆ
ಎಂದು
ದೂರಿದರು.
ರಾಜಕಾರಣಿಗಳಿಗಿಂತ
ಹೆಚ್ಚಾಗಿ
ಐಪಿಎಸ್
ಅಧಿಕಾರಿಗಳು
ಕೆಳ
ಮಟ್ಟದ
ಅಧಿಕಾರಿಗಳನ್ನು
ಶೋಷಣೆ
ಮಾಡುತ್ತಿದ್ದಾರೆ.
ರಜೆ
ಪಡೆಯಲು
ಹಿರಿಯ
ಅಧಿಕಾರಿಗಳಿಗೆ
ಲಂಚ
ಕೊಡಬೇಕಾದ
ಪರಿಸ್ಥಿತಿ
ಇದೆ'
ಎಂದು
ಕುಮಾರಸ್ವಾಮಿ
ಆರೋಪ
ಮಾಡಿದರು.
* ಮಹಿಳಾ ಸಂಘಟನೆಗಳ ಸದಸ್ಯರು ಪೂರ್ಣಿಮಾ ಅವರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಸ್ಮಾ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ನಡೆಸದಂತೆ ಸೂಚಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.[ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್ ಬಂಧನ]
* ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರ ಪತ್ನಿ ಪೂರ್ಣಿಮಾ ಅವರು ಪತಿಯ ಪರವಾಗಿ ಫ್ರೀಡಂಪಾರ್ಕ್ನಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
* ಹುಬ್ಬಳ್ಳಿಯಲ್ಲಿ ಠಾಣೆಯಲ್ಲೇ ಕೂತ ಸಂಚಾರಿ ಪೊಲೀಸರು, ರಸ್ತೆಗಳಲ್ಲಿ ಸಂಚಾರ ದಟ್ಟಣೆ
* 'ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಲ್ಲಿಯೂ ಪ್ರತಿಭಟನೆ ನಡೆಯುತ್ತಿಲ್ಲ' ಎಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
* 'ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸುವುದಿಲ್ಲ. ಎಲ್ಲ ಪೊಲೀಸರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಮಂಗಳೂರು ನಗರಕ್ಕೆ ಬಿಎಸ್ಎಫ್ ತುಕಡಿಯನ್ನು ಕರೆಸಿಕೊಳ್ಳಲಾಗಿದೆ' ಎಂದು ಎಸ್ಪಿ ಭೂಷಣ್ ಬೊರಸೆ ಹೇಳಿದರು.
* ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ರಾಮನಗರದಲ್ಲಿ ಪೊಲೀಸರ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ಸಕ್ಕಿದೆ. ಎಂದಿನಂತೆ ಕೆಲಸಕ್ಕೆ ಸಿಬ್ಬಂದಿ ಹಾಜರಾಗಿದ್ದಾರೆ. ಸಂಚಾರಿ ಪೊಲೀಸರು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
* ಪೊಲೀಸ್ ವಸತಿ ಗೃಹಗಳಿಗೆ ತೆರಳದಂತೆ ಮಾಧ್ಯಮದವರಿಗೆ ನಿರ್ಬಂಧ