'ಪರಿಷತ್ ಚುನಾವಣೆಗೆ ರಮ್ಯಾಗೆ ಟಿಕೆಟ್ ಕೊಡಬೇಡಿ'
ಮಂಡ್ಯ, ನವೆಂಬರ್ 26 : 'ವಿಧಾನಪರಿಷತ್ ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾ ಅವರಿಗೆ ಟಿಕೆಟ್ ನೀಡಬಾರದು. ಪಕ್ಷದ ಕಾರ್ಯಕರ್ತರು ಕೇವಲ ಬ್ಯಾನರ್ ಕಟ್ಟಿಕೊಂಡು ಇರುವುದಲ್ಲ ಅವರಿಗೂ ಅಧಿಕಾರ ಸಿಗಬೇಕು' ಎಂದು ಕಾಂಗ್ರೆಸ್ ಮುಖಂಡ ಭಾಸ್ಕರ್ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ
ಮಾತನಾಡಿದ
ಶ್ರೀರಂಗಪಟ್ಟಣದ
ಕಾಂಗ್ರೆಸ್
ಮುಖಂಡ
ಭಾಸ್ಕರ್
ಅಂಬರೀಶ್
ಅವರು,'ರಮ್ಯಾ
ಅವರಿಗೆ
ಈಗಾಗಲೇ
ಲೋಕಸಭೆ
ಚುನಾವಣೆಯಲ್ಲಿ
2
ಬಾರಿ
ಟಿಕೆಟ್
ನೀಡಲಾಗಿದೆ.
ಆದ್ದರಿಂದ
ಈ
ಬಾರಿ
ಪರಿಷತ್
ಚುನಾವಣೆಯಲ್ಲಿ
ಅವರ
ಬದಲು
ನನಗೆ
ಟಿಕೆಟ್
ನೀಡಬೇಕು'
ಎಂದು
ಒತ್ತಾಯಿಸಿದರು.
[ಎಂಎಲ್ಸಿ
ಚುನಾವಣೆ
ಲಾಬಿ,
ರಮ್ಯಾ
ಹೆಸರು
ಐತೇನ್ರಿ!]
'ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದಲ್ಲಿ ಒಬ್ಬರಿಗೆ ಒಂದು ಬಾರಿ ಅಧಿಕಾರ ಕೊಟ್ಟ ನಂತರ ಮತ್ತೆ ಅವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ನಿಯಮವಿದೆ. ಎರಡು ಬಾರಿ ಚುನಾವಣೆಯಲ್ಲಿ ನಾನು ರಮ್ಯ ಅವರ ಪರವಾಗಿ ಕೆಲಸ ಮಾಡಿದ್ದೇನೆ. ಮತ್ತೆ ಅವರಿಗೆ ಅವಕಾಶ ನೀಡುವುದು ಬೇಡ' ಎಂದು ಭಾಸ್ಕರ್ ಹೇಳಿದ್ದಾರೆ. [ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟ]
'ಪಕ್ಷದ ಕಾರ್ಯಕರ್ತರು ಕೇವಲ ಬ್ಯಾನರ್ ಕಟ್ಟಲು ಸೀಮಿತಗೊಳ್ಳಬಾರದು. ಅವರಿಗೂ ಅಧಿಕಾರ ಸಿಗಬೇಕು, ನಾಯಕರು ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಅಥವ ತಮಗೆ ಎಂಎಲ್ಸಿ ಟಿಕೆಟ್ ನೀಡಬೇಕು' ಎಂದು ಭಾಸ್ಕರ್ ತಿಳಿಸಿದ್ದಾರೆ. [ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ]
ಅಂದಹಾಗೆ ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಡಿಸೆಂಬರ್ 27ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
'ವಿಧಾನಪರಿಷತ್ ಟಿಕೆಟ್ ಹಂಚಿಕೆ ಮಾಡುವಾಗ ತಮಗೂ ಪ್ರಾತಿನಿಧ್ಯ ನೀಡಬಹುದು' ಎಂದು ಮಾಜಿ ಸಂಸದೆ ರಮ್ಯಾ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದ್ದರಿಂದ ಮಂಡ್ಯ ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ರಮ್ಯಾ ಅವರಿಗೆ ಟಿಕೆಟ್ ನೀಡಬೇಡಿ ಎಂಬ ಕೂಗು ಎದ್ದಿದೆ.