ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣ : 101 ಅಡಿ ಎತ್ತರದ ವಿಶ್ವಕರ್ಮ ಮೂರ್ತಿ ಪ್ರತಿಷ್ಠಾಪನೆ

|
Google Oneindia Kannada News

ಬೆಂಗಳೂರು, ಫೆ. 19 : ಚನ್ನಪಟ್ಟಣದ ಬಳಿ 101 ಅಡಿ ಎತ್ತರದ ವಿಶ್ವಕರ್ಮನ ಪಂಚಮುಖ ಏಕಶಿಲಾ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಫೆ.22ರಂದು ಮೂರ್ತಿ ಕೆತ್ತನೆಗೆ ಚಾಲನೆ ನೀಡಲಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೆ.ಪಿ.ನಂಜುಂಡಿ ಅವರು, ವಿಶ್ವಕರ್ಮ ಸಮಾಜದ ಗುರುವಾದ ವಿಶ್ವಕರ್ಮನ 101 ಅಡಿ ಎತ್ತರದ ಪಂಚಮುಖ ಏಕಶಿಲಾ ಪ್ರತಿಮೆಯನ್ನು ನಿರ್ಮಿಸಲು ಉದ್ದೇಶಿಸಿದ್ದು, ಪ್ರತಿಮೆ ಕೆತ್ತನೆ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ಫೆ.22ರಂದು ಚಾಲನೆ ನೀಡಲಿದ್ದಾರೆ ಎಂದರು.

K. P. Nanjundi

ದೇವನಹಳ್ಳಿ ತಾಲೂಕಿನ ಚಿಕ್ಕಗೊಲ್ಲಹಳ್ಳಿ ಬಳಿಯ ಕೊಯಿರಾ ಬಂಡೆಯಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಅಂದು ವಿಶ್ವಕರ್ಮ ಜಾತಿಯ ಜನಗಣತಿಯ ಆಂದೋಲನಕ್ಕೂ ಚಾಲನೆ ದೊರೆಯಲಿದೆ ಎಂದು ಕೆ.ಪಿ.ನಂಜುಂಡಿ ತಿಳಿಸಿದರು. [ಚನ್ನಪಟ್ಟಣದ ಗೊಂಬೆಗೆ ಗಣರಾಜ್ಯೋತ್ಸವ ಬಹುಮಾನ]

150 ಶಿಲ್ಪಿಗಳು : 101 ಅಡಿ ಎತ್ತರದ ಪ್ರತಿಮೆ ಕೆತ್ತನೆ ಕಾರ್ಯದಲ್ಲಿ 150 ಶಿಲ್ಪಿಗಳು ಪಾಲ್ಗೊಳ್ಳಲಿದ್ದಾರೆ. 12 ಅಡಿ ದಪ್ಪ, 71 ಅಡಿ ಉದ್ದ, 24 ಅಡಿ ಅಗಲ, 30 ಅಡಿ ಪೀಠವನ್ನು ಈ ಪ್ರತಿಮೆ ಒಳಗೊಂಡಿದೆ. ತಮಿಳುನಾಡು ಮೂಲದ ಶಿಲ್ಪಿ ದಕ್ಷಿಣಾಮೂರ್ತಿ ಅವರ ನೇತೃತ್ವದಲ್ಲಿ ಕೆತ್ತನೆ ಕಾರ್ಯ ನಡೆಯಲಿದೆ ಎಂದರು.

ಪ್ರತಿಮೆ ನಿರ್ಮಾಣಕ್ಕಾಗಿ ಸುಮಾರು 30 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಮೂರು ವರ್ಷಗಳಲ್ಲಿ ಈ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಳ್ಳಲಿದೆ. ಪ್ರತಿಮೆಯನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಚನ್ನಪಟ್ಟಣದ ಬಳಿಯ 4 ಎಕರೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

English summary
Vishwakarma Samaj President K. P. Nanjundi said, The Vishwakarma Mahasabha would install a 101 feet statue of Lord Vishwakarma in Channapatna on Bengaluru-Mysuru highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X