ಲೋಕಾಯುಕ್ತ ಕಚೇರಿ ಕೆಲಸದ ಅವಧಿ ವಿಸ್ತರಣೆ
ಬೆಂಗಳೂರು, ಆಗಸ್ಟ್ 24 : ಕರ್ನಾಟಕ ಲೋಕಾಯುಕ್ತ ಕಚೇರಿಯ ಕೆಲಸದ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಒಂದು ಗಂಟೆಗಳ ಕಾಲ ಸಮಯವನ್ನು ವಿಸ್ತರಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ.
ಹಿಂದಿನ
ವೇಳಾಪಟ್ಟಿಯಂತೆ
ಲೋಕಾಯುಕ್ತ
ಕಚೇರಿ
ಬೆಳಗ್ಗೆ
10.30ಕ್ಕೆ
ಆರಂಭವಾಗಿ
5
ಗಂಟೆಗೆ
ಮುಕ್ತಾಯ
ವಾಗುತ್ತಿತ್ತು.
ಪರಿಷ್ಕೃತ
ಆದೇಶದಂತೆ
ಬೆಳಗ್ಗೆ
ಮತ್ತು
ಸಂಜೆ
ಅರ್ಧ
ಗಂಟೆಗಳ
ಕಾಲ
ಒಟ್ಟು
1
ಗಂಟೆ
ಸಮಯವನ್ನು
ವಿಸ್ತರಣೆ
ಮಾಡಲಾಗಿದೆ.[ಸರ್ಕಾರಕ್ಕೆ
ಮುಖಭಂಗ,
ಲೋಕಾಯುಕ್ತ
ಕಡತ
ಮತ್ತೆ
ವಾಪಸ್]
ನೂತನ ಆದೇಶದ ಪ್ರಕಾರ ಲೋಕಾಯುಕ್ತ ಕಚೇರಿ ಬೆಳಗ್ಗೆ 10 ಕ್ಕೆ ಬಾಗಿಲು ತೆರೆಯಲಿದ್ದು, ಸಂಜೆ 5.30ರ ತನಕ ಕಾರ್ಯ ನಿರ್ವಹಣೆ ಮಾಡಲಾಗಿದೆ. ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಈ ಕುರಿತು ಬುಧವಾರ ಆದೇಶ ಹೊರಡಿಸಿದ್ದಾರೆ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ 7ನೇ ಆರೋಪಿ]
ಲೋಕಾಯುಕ್ತರೇ ಇಲ್ಲ : ಲೋಕಾಯುಕ್ತ ಕಚೇರಿ 1 ಗಂಟೆ ಹೆಚ್ಚು ಕಾರ್ಯನಿರ್ವಹಿಸಿದರೂ ಅಲ್ಲಿ ಲೋಕಾಯುಕ್ತರಿಲ್ಲ. ಲೋಕಾಯುಕ್ತ ನೇಮಕದ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಎರಡು ಬಾರಿ ಮುಖಭಂಗವಾಗಿದೆ. ಲೋಕಾಯುಕ್ತ ಹುದ್ದೆಗೆ ಸರ್ಕಾರ ಶಿಫಾರಸು ಮಾಡಿದ್ದ ನ್ಯಾ.ಎಸ್.ಆರ್.ನಾಯಕ್ ಅವರ ಹೆಸರನ್ನು ರಾಜ್ಯಪಾಲರು 2 ಬಾರಿ ತಿರಸ್ಕರಿಸಿದ್ದಾರೆ.
ನ್ಯಾ.ಭಾಸ್ಕರರಾವ್ ಅವರಿಂದ ತೆರವಾಗಿರುವ ಕರ್ನಾಟಕ ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಪ್ರಸ್ತಾವನೆಯನ್ನು ಅವರು ವಾಪಸ್ ಕಳಿಸಿದ್ದಾರೆ.