ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಲ್ಲಿ ಅಧಿಕಾರಕ್ಕೆ ಯಾರು: ಕೋಡಿಮಠ ಭವಿಷ್ಯ

By Srinath
|
Google Oneindia Kannada News

Lok Sabha Election 2014 - Kodimath Seer predicts BJP Narendra Modi win
ಗೊರೇಬಾಳ, ಫೆ.8: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಯಾವ ಪಕ್ಷ ಮತ್ತು ದಯನೀಯವಾಗಿ ಸೋಲುವುದು ಯಾವ ಪಕ್ಷ ಎಂಬುದರ ಬಗ್ಗೆ ಹಾಸನದ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಯಚೂರು ಜಿಲ್ಲೆಯಲ್ಲಿ ಭವಿಷ್ಯ ನುಡಿದಿದ್ದಾರೆ.

ಭಾರತೀಯ ಜನತಾ ಪಕ್ಷವು ತನ್ನದೇ ಸಾಮರ್ಥದಿಂದ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲವಾದರೂ ಇತರೆ ಪಕ್ಷಗಳ ನೆರವಿನೊಂದಿಗೆ ಕೇಂದ್ರದಲ್ಲಿ ನೂತನ ಸರಕಾರ ಸ್ಥಾಪಿಸಲಿದೆ ಎಂದು ಕೋಡಿಮಠ ಶ್ರೀ ಭವಿಷ್ಯ ಹೇಳಿದ್ದಾರೆ. ( ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗೋ ಯೋಗ ಇದೆ )

ರಾಯಚೂರು ಜಿಲ್ಲೆಯ ಗೊರೇಬಾಳದ ವಳಬಳ್ಳಾರಿ ಗ್ರಾಮದ ಚನ್ನಬಸವ ಶಿವಯೋಗಿಗಳ 31ನೇ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಕೋಡಿಮಠ ಸ್ವಾಮಿಗಳು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು.

ಮುದ್ದಿನ ಗಿಳಿ ಮುದ್ದಾಗಿ ಮುದುಕಾಗಿದೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಲಿದೆ ಎಂದು ಸೂಚ್ಯವಾಗಿ ಹೇಳಿದರು. ( ಭವಿಷ್ಯದ ವ್ಯಾಖ್ಯಾನ ಬದಲಿಸಿದ ಕೋಡಿಮಠಶ್ರೀ )

ಮುಂದಿನ ಲೀಕಸಭಾ ಚುನಾವಣೆಯಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಬಿಜೆಪಿ, ಇತರೆ ಪಕ್ಷಗಳೊಂದಿಗೆ ಕೈಜೋಡಿಸಿ ಅಧಿಖಾರದ ಗದ್ದುಗೆ ಏರಲಿದೆ ಎಂದು ಕೋಡಿಮಠ ಸ್ವಾಮಿಗಳು ಹೇಳಿದರು.

English summary
Lok Sabha Election 2014 - Kodimath Seer Sri Shivananda Rajendra Swamiji has predicted that though BJP cant come to power on its own it will form the Govt and Congress will face a certain defeat in the ensuing Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X