ರಾಜ್ಯಸಭೆ ಸದಸ್ಯರಾಗಲು ಕಾಂಗ್ರೆಸ್ನಲ್ಲಿ ಪೈಪೋಟಿ
ಬೆಂಗಳೂರು, ಮೇ 02 : ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದೆ. ನಾಲ್ಕು ಸ್ಥಾನಗಳು ತೆರವಾಗಲಿದ್ದು, ಕಾಂಗ್ರೆಸ್ ಪಾಲಿಗೆ 2 ಸ್ಥಾನ ಖಚಿತವಾಗಿ ಸಿಗುತ್ತದೆ. ಜೆಡಿಎಸ್ ಜೊತೆ ಕೈ ಜೋಡಿಸಿದರೆ ಮೂರು ಸ್ಥಾನಗಳನ್ನು ಪಡೆಯಬಹುದಾಗಿದೆ.
ರಾಜ್ಯದಿಂದ
ರಾಜ್ಯಸಭಾ
ಸದಸ್ಯರಾಗಿ
ಆಯ್ಕೆಯಾಗಿರುವ
ಎಂ.ವೆಂಕಯ್ಯ
ನಾಯ್ಡು
(ಬಿಜೆಪಿ),
ಆಯನೂರು
ಮಂಜುನಾಥ್
(ಬಿಜೆಪಿ),
ಆಸ್ಕರ್
ಫರ್ನಾಂಡೀಸ್
(ಕಾಂಗ್ರೆಸ್),
ವಿಜಯ್
ಮಲ್ಯ(ಪಕ್ಷೇತರ)
ಅವರ
ಅವಧಿ
ಜೂನ್
30ಕ್ಕೆ
ಅಂತ್ಯಗೊಳ್ಳಲಿದೆ.
ತೆರವಾಗುವ
ಸ್ಥಾನಗಳಿಂದ
ಆಯ್ಕೆಯಾಗಲು
ಪೈಪೋಟಿ
ನಡೆಯುತ್ತಿದೆ.
[ಕೃಷ್ಣ
ದೆಹಲಿಗೆ,
ಸಿದ್ದರಾಮಯ್ಯ
ಬದಲಾವಣೆ?]
ಕರ್ನಾಟಕ ವಿಧಾನಸಭೆಯಲ್ಲಿ 123 ಶಾಸಕ ಬಲ ಹೊಂದಿರುವ ಕಾಂಗ್ರೆಸ್ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಶಕ್ತಿ ಹೊಂದಿದೆ. ಒಬ್ಬರು ಸದಸ್ಯರು ಆಯ್ಕೆ ಆಗಲು 45 ಮತಗಳು ಬೇಕು. ಒಂದು ವೇಳೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ 3ನೇ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಬಹುದಾಗಿದೆ. [ನಾಯಕತ್ವ ಬದಲಾವಣೆ ವರದಿ ತಳ್ಳಿಹಾಕಿದ ಸಿದ್ದರಾಮಯ್ಯ]
ಆಸ್ಕರ್ ಮರು ಆಯ್ಕೆ? : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವ ಆಸ್ಕರ್ ಫರ್ನಾಂಡೀಸ್ ಮರು ಆಯ್ಕೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಉಳಿದ ಮೂರು ಸ್ಥಾನಗಳಿಗಾಗಿ ಪೈಪೋಟಿ ನಡೆಯುತ್ತಿದೆ. ಒಂದು ಸ್ಥಾನ ಮಹಿಳೆಯರಿಗೆ ನೀಡಬೇಕು ಎಂಬ ಕೂಗೂ ಎದ್ದಿದೆ. [ಒಂದೇ ವೇದಿಕೆಯಲ್ಲಿ ಗೌಡ್ರು, ಎಸ್ ಎಂ ಕೃಷ್ಣ: ಶತ್ರುವಿನ ಶತ್ರು.. ಮಿತ್ರ?]
ಯಾರ ನಡುವೆ ಪೈಪೋಟಿ : ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಎಚ್.ವಿಶ್ವನಾಥ್, ಜನಾರ್ದನ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಂಸದೆ ರಮ್ಯಾ ನಡುವೆ ಪೈಪೋಟಿ ನಡೆಯುತ್ತಿದೆ ಎಂಬುದು ಸದ್ಯದ ಸುದ್ದಿ.
ಜೆಡಿಎಸ್ ಜೊತೆ ಮೈತ್ರಿ? : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದರು. ಇದರಿಂದಾಗಿ ಜೆಡಿಎಸ್ ಎಸ್.ಎಂ.ಕೃಷ್ಣ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಬೆಂಬಲ ಕೊಡುವುದೇ? ಎಂದು ಕಾದು ನೋಡಬೇಕು.