ಮಹದಾಯಿ ವಿವಾದ : ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ
ಬೆಂಗಳೂರು, ಜುಲೈ 28 : ಮಹದಾಯಿ ನ್ಯಾಯಮಂಡಳಿ ಕರ್ನಾಟಕ ಸರ್ಕಾರದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಗದಗ, ಧಾರವಾಡ, ಹುಬ್ಬಳ್ಳಿಯಲ್ಲಿ ಗುರುವಾರ ಬಂದ್ ಆಚರಣೆ ಮಾಡಲಾಗುತ್ತಿದೆ.
7.56
ಟಿಎಂಸಿ
ನೀರನ್ನು
ಬಳಕೆ
ಮಾಡಿಕೊಳ್ಳಲು
ಕರ್ನಾಟಕ
ಸಲ್ಲಿಸಿದ್ದ
ಮಧ್ಯಂತರ
ಅರ್ಜಿಯನ್ನು
ಮಹದಾಯಿ
ನ್ಯಾಯಮಂಡಳಿ
ಬುಧವಾರ
ತಿರಸ್ಕರಿಸಿದೆ.
ನೀರು
ಬಳಕೆ
ಮಾಡಿಕೊಳ್ಳಲು
ಅವಕಾಶ
ನೀಡಲು
ಸಾಧ್ಯವಿಲ್ಲ
ಎಂದು
ನ್ಯಾಯಮಂಡಳಿ
ಸ್ಪಷ್ಟಪಡಿಸಿದೆ.[ಕರ್ನಾಟಕದ
ಅರ್ಜಿ
ತಿರಸ್ಕರಿಸಿದ
ಮಹದಾಯಿ
ನ್ಯಾಯ
ಮಂಡಳಿ]
ನ್ಯಾಯಮಂಡಳಿ ಆದೇಶದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯಾದ್ಯಂತ ಹೋರಾಟ ನಡೆಸಲು ರೈತ ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರು ನಿರ್ಧರಿಸಿದ್ದಾರೆ. ಜುಲೈ 30ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. [ಚಿತ್ರಗಳು : ಉತ್ತರ ಕರ್ನಾಟಕದಲ್ಲಿ ಮಹದಾಯಿ ಹೋರಾಟ]
*
ನವಲಗುಂದದಲ್ಲಿ
ಮಹದಾಯಿ
ಹೋರಾಟ
ಹಿಂಸಾರೂಪಕ್ಕೆ
ತಿರುಗಿದ್ದರಿಂದ
ನಿಷೇಧಾಜ್ಞೆ
ಜಾರಿಗೊಳಿಸಿ
ಎಸ್.ಬಿ.
ಬೊಮ್ಮನಹಳ್ಳಿ
ಅವರು
ಆದೇಶ
ಹೊರಡಿಸಿದ್ದಾರೆ.
* ಮಹದಾಯಿ ತೀರ್ಪು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಎಸ್ಎನ್ಎಲ್ ಕಚೇರಿ, ಪುರಸಭೆ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. [ನವಲಗುಂದದಲ್ಲಿ ಹಿಂಸಾಚಾರ]
* ಮಹದಾಯಿ ತೀರ್ಪು ವಿರೋಧಿಸಿ ಮಂಡ್ಯದ ವಿಸಿ ಫಾರಂ ಬಳಿ ರೈತ ಸಂಘಟನೆಯವರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
*
ಬೆಂಗಳೂರಿನ
ಮೈಸೂರು
ಬ್ಯಾಂಕ್
ವೃತ್ತದಲ್ಲಿ
ಮಹದಾಯಿ
ತೀರ್ಪಿನ
ವಿರುದ್ಧ
ಪ್ರತಿಭಟನೆ
ನಡೆಯಿತು.
ಮಾಧ್ಯಮಗಳ
ಜೊತೆ
ಮಾತನಾಡಿದ
ರೈತ
ಸಂಘದ
ಅಧ್ಯಕ್ಷ
ಕೆ.ಎಸ್.ಪುಟ್ಟಣ್ಣಯ್ಯ
ಅವರು,
'ಕಾವೇರಿ,
ಕೃಷ್ಣ,
ಮಹದಾಯಿ
ಎಲ್ಲಾ
ವಿಚಾರದಲ್ಲೂ
ರಾಜ್ಯಕ್ಕೆ
ಅನ್ಯಾಯವಾಗಿದೆ.
ಕರ್ನಾಟಕವನ್ನು
ಪ್ರತಿನಿಧಿಸುವ
ಸಂಸದರಿಗೆ
ನೈತಿಕತೆ
ಇದ್ದರೆ
ರಾಜೀನಾಮೆ
ನೀಡಬೇಕು,
ಇಲ್ಲವಾದಲ್ಲಿ
ಕೇಂದ್ರ
ಸರ್ಕಾರದ
ಮಧ್ಯಪ್ರವೇಶಕ್ಕೆ
ಪ್ರಧಾನಿ
ಅವರನ್ನು
ಒತ್ತಾಯಿಸಬೇಕು'
ಎಂದು
ಆಗ್ರಹಿಸಿದರು.
* ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬೆಳಗಾವಿಯ ಮಹಾಂತೇಶ ನಗರದ ಬಳಿ ಬಂಧಿಸಲಾಗಿದೆ.
* ಮಹದಾಯಿ ತೀರ್ಪಿನ ವಿರುದ್ಧ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
* ಧಾರವಾಡದಲ್ಲಿ ತೀವ್ರಗೊಂಡ ಮಹದಾಯಿ ಹೋರಾಟ, ಆಕಾಶವಾಣಿ ಕೇಂದ್ರದ ಕಲ್ಲೆಸೆತ
* ಹುಬ್ಬಳ್ಳಿ ಜ್ಯುಬಲಿ ಸರ್ಕಲ್ನಲ್ಲಿ ಲಾರಿಗಳ ಟೈರ್ ಗಾಳಿ ಬಿಟ್ಟು ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರರು.
* ಇಂದು ಬೆಳಗಾವಿ ಬಂದ್ಗೆ ಕರೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
* ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟುಗಳು ಬಂದ್. ಧಾರವಾಡ ಬಂದ್ ಕರೆಗೆ ಉತ್ತಮ ಪತಿಕ್ರಿಯೆ ಮುಂಜಾನೆಯಿಂದಲೇ ಸಂಚಾರ ಸ್ಥಗಿತ.
* ಹುಬ್ಬಳ್ಳಿಯಲ್ಲಿ ಬಂದ್ ಕರೆ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ. ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್
* ಹಾವೇರಿಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚುವ ವಿಚಾರದಲ್ಲಿ ಪೊಲೀಸರ ಜೊತೆ ವಾಗ್ವಾದ, ಸಿದ್ದರಾಮಯ್ಯ, ನರೇಂದ್ರ ಮೋದಿ ಫೋಟೋಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು ವಿವಿಧ ಸಂಘಟನೆಗಳ ಸದಸ್ಯರು.
* ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
* 'ಮಹದಾಯಿ ನ್ಯಾಯಮಂಡಳಿ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಒತ್ತಾಯಿಸಲಾಗುವುದು. ಮುಂದಿನ ನಡೆ ಕುರಿತು ಚರ್ಚಿಸಲು ಮುಂದಿನ ವಾರ ಸರ್ವ ಪಕ್ಷ ಸಭೆ ಕರೆಯಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.