ವಿಬ್ ಗಯಾರ್ ಶಾಲೆಗೆ ನುಗ್ಗಿದ ಚಿರತೆ
ಬೆಂಗಳೂರು, ಫೆಬ್ರವರಿ 7 : ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೂರಾರು ಜನರು ಚಿರತೆ ನೋಡಲು ಶಾಲಾ ಆವರಣಕ್ಕೆ ಆಗಮಿಸಿದ್ದಾರೆ. [ಚಿರತೆ ಹಿಡಿಯುವ ಕಾರ್ಯಾಚರಣೆ ಚಿತ್ರಗಳು]
ಭಾನುವಾರ
ಮುಂಜಾನೆ
4.15ರ
ಸುಮಾರಿಗೆ
ಚಿರತೆ
ಶಾಲೆಯ
ಆವರಣದೊಳಗೆ
ಆಗಮಿಸುತ್ತಿರುವುದನ್ನು
ಭದ್ರತಾ
ಸಿಬ್ಬಂದಿ
ಸಿಸಿಟಿವಿಯಲ್ಲಿ
ಗಮನಿಸಿದ್ದಾರೆ.
ಈ
ಬಗ್ಗೆ
ವರ್ತೂರು
ಪೊಲೀಸರಿಗೆ
ಮಾಹಿತಿ
ನೀಡಿದ್ದಾರೆ.
ಅರಣ್ಯ
ಇಲಾಖೆ
ಮತ್ತು
ಪೊಲೀಸರು
ಸ್ಥಳಕ್ಕೆ
ಆಗಮಿಸಿದ್ದು,
ಚಿರತೆಗಾಗಿ
ಹುಡುಕಾಟ
ನಡೆಸುತ್ತಿದ್ದಾರೆ.
[ಚಿಕ್ಕಮಗಳೂರು
:
ಕಾಲೇಜಿಗೆ
ನುಗ್ಗಿದ
ಚಿರತೆ]
ಭಾನುವಾರವಾದ್ದರಿಂದ ಶಾಲೆಗೆ ರಜೆ ಇದೆ. ಆದರೆ, ನೂರಾರು ಜನರು ಶಾಲೆಯ ಆವರಣದಲ್ಲಿ ಸೇರಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. [ಚಿತ್ರಗಳು : ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ]
'ಶಾಲೆಗೆ ನುಗ್ಗಿರುವುದು ಚಿರತೆಯೇ. ಸಿಸಿಟಿವಿಯಲ್ಲಿ ಅದರ ಸ್ಪಷ್ಟ ದೃಶ್ಯಾವಳಿಗಳು ಸೆರೆಯಾಗಿವೆ' ಎಂದು ಶಾಲೆಯ ಕಟ್ಟಡದ ಮಾಲೀಕ ಮುನಿರಾಜು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಅತ್ಯಾಚಾರ ಪ್ರಕರಣದಿಂದ ಸುದ್ದಿಯಾದ ಶಾಲೆ]
ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಶಾಲೆಯ ಆವರಣದಲ್ಲಿ ಪರಿಶೀಲನೆ ನಡೆಸಿದ ಬಳಿಕ ಚಿರತೆ ಹಿಡಿಯಲು ಬೋನನ್ನು ಇಡುವ ಸಾಧ್ಯತೆ ಇದೆ.
ಒಂದು ವೇಳೆ ಚಿರತೆ ಇಂದು ಪತ್ತೆಯಾಗದಿದ್ದರೆ ಫೆ.8ರ ಸೋಮವಾರ ಶಾಲೆಗೆ ರಜೆ ಘೋಷಣೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಈ ಬಗ್ಗೆ ಪೋಷಕರಿಗೆ ಎಸ್ಎಂಎಸ್ ಕಳಿಸಲಾಗುತ್ತದೆ ಎಂದು ತಿಳಿದುಬಂದಿದೆ.