ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಜಮೀರ್ ಅಹಮದ್
ಬೆಂಗಳೂರು, ಜೂನ್ 10 : ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರು 7 ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಶುಕ್ರವಾರ ಮತದಾನ ಮಾಡಿದರು. ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ 8 ಅಭ್ಯರ್ಥಿಗಳು ಕಣದಲ್ಲಿದ್ದರು.
ವಿಧಾನಸೌಧದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತು. 5 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. 6 ಗಂಟೆಯ ವೇಳೆಗೆ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.[ಪರಿಷತ್ ಚುನಾವಣೆ ಹೇಗೆ ನಡೆಯುತ್ತದೆ?]
ಫಲಿತಾಂಶ
*
ಕಾಂಗ್ರೆಸ್ನ
ರಿಜ್ವಾನ್
ಅರ್ಷದ್,
ವೀಣಾ
ಅಚ್ಚಯ್ಯ,
ಅಲ್ಲಂ
ವೀರಭದ್ರಪ್ಪ,
ಆರ್.ಬಿ.ತಿಮ್ಮಾಪುರ
ಅವರಿಗೆ
ಗೆಲುವು
*
ಬಿಜೆಪಿಯ
ವಿ.ಸೋಮಣ್ಣ,
ಲೆಹರ್
ಸಿಂಗ್ಗೆ
ಗೆಲುವು
*
ಜೆಡಿಎಸ್ನ
ಕೆ.ವಿ.ನಾರಾಯಣ
ಸ್ವಾಮಿಗೆ
ಗೆಲುವು
*
ಜೆಡಿಎಸ್ನ
ಎರಡನೇ
ಅಭ್ಯರ್ಥಿ
ಡಾ.ವೆಂಕಟಪತಿ
ಅವರಿಗೆ
ಸೋಲು
ಮತದಾನದ ಪ್ರಮುಖ ಸುದ್ದಿಗಳು
* 'ಪಕ್ಷದ ವರಿಷ್ಠರು ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದು ಕೇಳಿಲ್ಲ. ಇಂದು ಮಧ್ಯಾಹ್ನದ ತನಕವೂ ಕಾದೆವು ಯಾರಿಂದಲೂ ಕರೆ ಬರಲಿಲ್ಲ. ಆದ್ದರಿಂದ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದೆ' ಎಂದು ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು. [ಭಿನ್ನಮತೀಯರ ಜೊತೆ ಮಾತುಕತೆ, ಬಾಗಿಲು ಮುಚ್ಚಿದ ಎಚ್ಡಿಕೆ]
* 'ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಪಕ್ಷದ ನಾಯಕರ ಹೇಳಿಕೆ, ನಡೆ ಬೇಸರ ತಂದಿದೆ' ಎಂದು ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಪರಿಷತ್ ಚುನಾನವಣೆಗೆ ಮತದಾನ ಮಾಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಶುಕ್ರವಾರ ಮಧ್ಯಾಹ್ನ ಮಾತನಾಡಿದರು.
* ಮತಪತ್ರದಲ್ಲಿ ಕನ್ನಡವಿದೆ. ನಮಗೆ ಕನ್ನಡ ಬರುವುದಿಲ್ಲ ಎಂದು ಎಂಇಎಸ್ ಶಾಸಕರು ಪರಿಷತ್ ಚುನಾವಣೆ ವೇಳೆ ಕ್ಯಾತೆ ತೆರೆದಿದ್ದಾರೆ. ಚುನಾವಣಾಧಿಕಾರಿಗಳು ಶಾಸಕರಿಗೆ ಇಂಗ್ಲಿಷ್ನಲ್ಲಿ ಮತಪತ್ರದಲ್ಲಿರುವ ಮಾಹಿತಿ ಕುರಿತು ವಿವರಣೆ ನೀಡಿದರು.
* 'ಪಕ್ಷದ ವರಿಷ್ಠರ ಸೂಚನೆಯಂತೆ ಅಭ್ಯರ್ಥಿಗೆ ಮತ ಹಾಕಿದ್ದೇನೆ' ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
*
ಮಲ್ಲೇಶ್ವರಂನಲ್ಲಿರುವ
ಪಕ್ಷದ
ಕಚೇರಿಯಲ್ಲಿ
ಬಿಜೆಪಿ
ಶಾಸಕಾಂಗ
ಪಕ್ಷದ
ಸಭೆ
ನಡೆಯಿತು.
ಎಲ್ಲಾ
ಶಾಸಕರು
ಪಕ್ಷದ
ಕಚೇರಿಯಿಂದ
ವಿಧಾನಸೌಧಕ್ಕೆ
ತೆರಳಲು
ಸಿದ್ಧವಾಗುತ್ತಿದ್ದಾರೆ.
ವಿಧಾನಪರಿಷತ್
ಚುನಾವಣೆಗೆ
ಬಿಜೆಪಿ
ವಿ.ಸೋಮಣ್ಣ
ಮತ್ತು
ಲೆಹರ್
ಸಿಂಗ್
ಅವರನ್ನು
ಕಣಕ್ಕಿಳಿಸಿದೆ.
* ಚುನಾವಣೆ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.
ಅಭ್ಯರ್ಥಿಗಳು
*
ಕಾಂಗ್ರೆಸ್
-
ರಿಜ್ವಾನ್
ಅರ್ಷದ್,
ವೀಣಾ
ಅಚ್ಚಯ್ಯ,
ಅಲ್ಲಂ
ವೀರಭದ್ರಪ್ಪ,
ಆರ್.ಬಿ.ತಿಮ್ಮಾಪುರ
*
ಬಿಜೆಪಿ
-
ವಿ.ಸೋಮಣ್ಣ,
ಲೆಹರ್
ಸಿಂಗ್
*
ಜೆಡಿಎಸ್
-
ನಾರಾಯಣ
ಸ್ವಾಮಿ,
ಡಾ.ವೆಂಕಟಪತಿ
[ಒಬ್ಬರು
ಅಭ್ಯರ್ಥಿ
ಗೆಲುವು
ಸಾಧಿಸಲು
29
ಮತಗಳು
ಬೇಕು]