ನಮ್ಮ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು: ಪರಮೇಶ್ವರ
ಬೆಂಗಳೂರು, ಅಕ್ಟೋಬರ್. 30: "ನಮ್ಮ ತಂದೆಯೇ ನನಗೆ ಕ್ಷೌರ ಮಾಡುತ್ತಿದ್ದರು. ಇನ್ನು ಕೆಲವು ಹೋಟೆಲ್ ಗಳಲ್ಲಿ ದಲಿತರಿಗೆಂದು ಬೇರೆಯದೇ ಲೋಟ ತೆಗೆದಿರಿಸುತ್ತಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಾವು ಎಷ್ಟು ದಿನ ಈ ಸಂಕಷ್ಟಗಳನ್ನು ದಲಿತರು ಸಹಿಸಿಕೊಳ್ಳಬೇಕು?" ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ, ಸಚಿವ ಡಾ. ಜಿ. ಪರಮೇಶ್ವರ ಅವರ ಕಣ್ಣಲ್ಲಿ ನೀರಿತ್ತು.
ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಅಭಿನಂದಿಸಲು ಕಾಂಗ್ರೆಸ್ ಹಮ್ಮಿಕೊಂಡಿದ್ದ "ಸಾರ್ಥಕ ಸಮಾವೇಶದಲ್ಲಿ" ಮಾತನಾಡಿದ ಪರಮೇಶ್ವರ ಬಿಜೆಪಿಯ ಮೇಲೆ ವಾಗ್ದಾಳಿ ಮಾಡಲು ಮರೆಯಲಿಲ್ಲ.[ಮಂಗಳವಾರ ಕ್ಷೌರದಂಗಡಿ ಮುಚ್ಚದ್ದಕ್ಕೆ ಭುಗಿಲೆದ್ದ ಹಿಂಸಾಚಾರ]
ನಾನು ಚಿಕ್ಕ ವಯಸ್ಸಿನಲ್ಲಿ ದಲಿತನಾಗಿ ಅನುಭವಿಸಿದ ನೋವು ಎಂದಿಗೂ ಮರೆಯಲ್ಲ. ದಲಿತ ಮಹಿಳೆಯರನ್ನು ಬೆತ್ತಲು ಗೊಳಿಸುವ ಅನಿಷ್ಟ ಪದ್ಧತಿ ಇನ್ನು ಇರುವ ಸಮಾಜದಲ್ಲಿ ನಾವಿದ್ದೇವೆ ಎಂಬುನ್ನು ಒಪ್ಪಿಕೊಳ್ಳಬೇಕಿದೆ ಎಂದು ಹೇಳಿದರು.
ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ದಲಿತರ ನೋವಿನ ಕಲ್ಪನೆಯೂ ಇಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಈ ದೇಶದಿಂದ ಹೊರಹೋಗಬೇಕು ಎಂಬ ಬಗೆಯಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.[ಸಂಪುಟ ಸೇರಿದ ಪರಮೇಶ್ವರ ಪರಿಚಯ]
ಸಿದ್ಧಗಂಗಾ
ಶ್ರೀ
ಆಶೀರ್ವಾದ
ಶುಕ್ರವಾರ
ಬೆಳಗ್ಗೆ
ತುಮಕೂರಿನ
ಸಿದ್ಧಗಂಗಾ
ಮಠಕ್ಕೆ
ಭೇಟಿ
ನೀಡಿದ
ಪರಮೇಶ್ವರ
ಡಾ.
ಶಿವಕುಮಾರ
ಸ್ವಾಮೀಜಿ
ಅವರ
ಆಶೀರ್ವಾದ
ಪಡೆದರು.
ಸ್ವಾಮೀಜಿ
ಜತೆ
ಸುಮಾರು
40
ನಿಮಿಷಗಳ
ಕಾಲ
ಚರ್ಚೆ
ನಡೆಸಿದರು.
ನಾನು ಸೋನಿಯಾ ಗಾಂಧಿ ಅವರ ಬಳಿ ಉಪಮುಖ್ಯಮಂತ್ರಿ ಹುದ್ದೆ ಕೇಳಿದ್ದು ನಿಜ. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಗಳು ಅದಕ್ಕೆ ಅವಕಾಶ ನೀಡಲಿಲ್ಲ. ಹೈ ಕಮಾಂಡ್ ಸೂಚಿಸಿದಂತೆ ಸಚಿವನಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದೇನೆ. ಯಾವ ಖಾತೆ ನೀಡಿದರೂ ನಿರ್ವಹಿಸಲು ಸಿದ್ಧ ಎಂದು ಹೇಳಿದರು.