ಸಿದ್ದರಾಮಯ್ಯ ಸಂಪುಟ ಸೇರುವ ಡಾ.ಜಿ.ಪರಮೇಶ್ವರ ಪರಿಚಯ
ಬೆಂಗಳೂರು, ಅಕ್ಟೋಬರ್ 29 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಸ್ಥಾನ ಮಾನ ಕಲ್ಪಿಸಬೇಕೆಂಬ ಬೇಡಿಕೆ ಈಡೇರಿದೆ. ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿರುವ ಪರಮೇಶ್ವರ ಅವರು ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿದ್ದಾರೆ.
2013ರ
ವಿಧಾನಸಭೆ
ಚುನಾವಣೆಯಲ್ಲಿ
ಕಾಂಗ್ರೆಸ್
ಪಕ್ಷ
ಸ್ಪಷ್ಟ
ಬಹುಮತ
ಪಡೆದು
ಕರ್ನಾಟಕದಲ್ಲಿ
ಅಧಿಕಾರದ
ಚುಕ್ಕಾಣಿ
ಹಿಡಿಯಿತು.
ತುಮಕೂರು
ಜಿಲ್ಲೆಯ
ಕೊರಟಗೆರೆ
ಕ್ಷೇತ್ರದಿಂದ
ಸ್ಪರ್ಧಿಸಿದ್ದ
ಕೆಪಿಸಿಸಿ
ಅಧ್ಯಕ್ಷ
ಡಾ.ಜಿ.ಪರಮೇಶ್ವರ
(62)
ಅವರು
54,074
ಮತಗಳನ್ನು
ಪಡೆದು
ಸೋಲು
ಅನುಭವಿಸಿದರು.
ಪರಮೇಶ್ವರ
ವಿರುದ್ಧ
ಸ್ಪರ್ಧಿಸಿದ್ದ
ಜೆಡಿಎಸ್ನ
ಸುಧಾಕರಲಾಲ್
72,229
ಮತಗಳನ್ನುಗಳಿಸಿ
ಜಯಗಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಮೇಶ್ವರ ಅವರಿಗೆ ಸೂಕ್ತ ಸ್ಥಾನ-ಮಾನ ನೀಡಬೇಕು ಎಂಬ ಕೂಗು ಆಗಲೇ ಹುಟ್ಟಿಕೊಂಡಿತು. ಪರಮೇಶ್ವರ ಅವರಿಗೆ ಡಿಸಿಎಂ ಪಟ್ಟ ಕೊಡಬೇಕು ಎಂಬ ಕೂಗು ಆಗಾಗ ಕೇಳಿಬಂದಿತು. [ಸಂಪುಟ ಸೇರುವ ನಾಲ್ವರ ಹೆಸರು ಅಂತಿಮ]
2014ರ ಜುಲೈ 1 ರಂದು ಡಾ.ಜಿ.ಪರಮೇಶ್ವರ ಅವರನ್ನು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸದ್ಯ, ಸಚಿವರಾಗಿ ಪರಮೇಶ್ವರ ಅವರು ಸಿದ್ದರಾಮಯ್ಯ ಅವರ ಸಂಪುಟ ಸೇರಲಿದ್ದಾರೆ. ಪರಮೇಶ್ವರ ಅವರಿಗೆ ಪ್ರಬಲ ಖಾತೆಯನ್ನು ನೀಡಲಾಗುತ್ತದೆ. ಯಾವ ಖಾತೆ ನೀಡಬೇಕು? ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಲಿದ್ದಾರೆ. [2013ರ ಚುನಾವಣಾ ಫಲಿತಾಂಶ]
ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ರೇಷ್ಮೆ ಸಚಿವರಾಗಿ, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಪರಮೇಶ್ವರ ಅವರ ಕೆಲಸ ಮಾಡಿದ ಅನುಭವ ಹೊಂದಿದ್ದು, ಈಗ ಮತ್ತೊಮ್ಮೆ ಸಚಿವರಾಗಿ ಗುರುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪರಮೇಶ್ವರ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ..
*
ದಲಿತ
ಜನಾಂಗಕ್ಕೆ
ಸೇರಿದ
ಪರಮೇಶ್ವರ
ಅವರು
3ನೇ
ಬಾರಿ
ಸಚಿವರಾಗುತ್ತಿದ್ದಾರೆ
*
1989ರಲ್ಲಿ
ಕೊರಟಗೆರೆ
ಕ್ಷೇತ್ರದಿಂದ
ಮೊದಲ
ಬಾರಿಗೆ
ವಿಧಾನಸಭೆಗೆ
ಆಯ್ಕೆ
*
ವೀರಪ್ಪ
ಮೊಯ್ಲಿ
ಸಂಪುಟದಲ್ಲಿ
ರೇಷ್ಮೆ
ಸಚಿವರಾಗಿ
ಕೆಲಸ
*
1999ರಲ್ಲಿ
ಶಾಸಕರಾಗಿ
ಮರು
ಆಯ್ಕೆ,
ಎಸ್.ಎಂ.ಕೃಷ್ಣ
ಸಂಪುಟದಲ್ಲಿ
ಉನ್ನತ
ಶಿಕ್ಷಣ
ಸಚಿವರಾಗಿ
ಕೆಲಸ
*
2013ರ
ಚುನಾವಣೆ
ಕೊರಟಗೆರೆಯಲ್ಲಿ
ಸೋಲು
*
2010ರ
ಅ.
29ರಂದು
ಕೆಪಿಸಿಸಿ
ಅಧ್ಯಕ್ಷರಾಗಿ
ನೇಮಕ
*
2014ರ
ಜುಲೈ
1
ರಂದು
ವಿಧಾನ
ಪರಿಷತ್
ಸದಸ್ಯರಾಗಿ
ಆಯ್ಕೆ