ಕೊಪ್ಪಳ : ಯಲ್ಲಾಲಿಂಗನನ್ನು ಕೊಂದು ಹಳಿ ಮೇಲೆ ಎಸೆಯಲಾಗಿತ್ತು
ಕೊಪ್ಪಳ, ಆಗಸ್ಟ್ 21 : ಆಡಳಿತ ಮತ್ತು ಪ್ರತಿಪಕ್ಷ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ಕೊಪ್ಪಳದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹನುಮೇಶ ನಾಯಕ ಮತ್ತು ಇತರ ಆರೋಪಿಗಳು ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಸಿಐಡಿ ಚಾರ್ಜ್ ಶೀಟ್ನಲ್ಲಿ ಹೇಳಿದೆ.
ಕೊಪ್ಪಳ
ಜಿಲ್ಲಾ
ನ್ಯಾಯಾಲಯಕ್ಕೆ
ಸಿಐಡಿ
ಪೊಲೀಸರು
ಜಾರ್ಜ್
ಶೀಟ್
ಸಲ್ಲಿಕೆ
ಮಾಡಿದ್ದಾರೆ.
ಆರೋಪಿ
ಹುನುಮೇಶ
ನಾಯಕ
ಕೊಪ್ಪಳ
ಜಿಲ್ಲಾ
ಉಸ್ತುವಾರಿ
ಸಚಿವ
ಶಿವರಾಜ
ತಂಗಡಗಿ
ಅವರ
ಬೆಂಬಲಿಗರಾಗಿದ್ದು,
ಈ
ಕೊಲೆ
ಪ್ರಕರಣವನ್ನು
ಮುಚ್ಚಿ
ಹಾಕಲು
ಸಚಿವರು
ಪ್ರಯತ್ನ
ನಡೆಸಿದ್ದಾರೆ
ಎಂದು
ಪ್ರತಿಪಕ್ಷ
ಬಿಜೆಪಿ
ಆರೋಪಿಸಿತ್ತು.
ಸರಣಿ
ಪ್ರತಿಭಟನೆಗಳನ್ನು
ನಡೆಸಿತ್ತು.
[ಯಲ್ಲಾಲಿಂಗ
ಕೊಲೆ
ಬಗ್ಗೆ
ಸಿಐಡಿ
ತನಿಖೆ]
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಹನುಮೇಶ ನಾಯಕ, ಮಹಾಂತೇಶ ನಾಯಕ, ಬಾಳನ ಗೌಡ, ಪರುಶರಾಮ, ನಂದಕುಮಾರ್, ಯಮನೂರಪ್ಪ, ದುರ್ಗಪ್ಪ, ಮನೋಜ್ ಪಾಟೀಲ್ ಸೇರಿದಂತೆ ಹಲವರನ್ನು ಬಂಧಿಸಿತ್ತು. [ಸಿಐಡಿಯಿಂದ ಹನುಮೇಶ ನಾಯಕ ಬಂಧನ]
ಜಾರ್ಜ್ ಶೀಟ್ನಲ್ಲೇನಿದೆ? : 2015ರ ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನನ್ನು ಕೊಲೆ ಮಾಡಿ ಗೂಡ್ಸ್ ರೈಲಿನ ಕೆಳಗೆ ಮೃತದೇಹವನ್ನು ಹಾಕಲಾಗಿದೆ. ರೈಲು ಹರಿದು ಆತನ ದೇಹ ತುಂಡಾಗಿದೆ ಎಂದು ಎಲ್ಲಾ ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಚಾರ್ಜ್ ಶೀಟ್ನಲ್ಲಿ ಹೇಳಿದೆ.
ಯಲ್ಲಾಲಿಂಗನ ಕೊಲೆ ನಡೆದಿದ್ದು ಏಕೆ? : ಗಂಗಾವತಿ ತಾಲೂಕಿನ ಕನಾಕಾಪುರದ ನಿವಾಸಿಯಾಗಿದ್ದ ಯಲ್ಲಾಲಿಂಗ ಸ್ಥಳೀಯ ಸುದ್ದಿವಾಹಿನಿಯನ್ನು ಗ್ರಾಮಕ್ಕೆ ಕರೆಸಿ ಚರಂಡಿ, ರಸ್ತೆ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾತನಾಡಿದ್ದ. ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಗಾರಿಗಳ ಬಗ್ಗೆ ವಿವರಗಳನ್ನು ಕೇಳಿದ್ದ.
ಆಗ ಆರೋಪಿಗಳು ಯಲ್ಲಾಲಿಂಗನ ಮನೆಗೆ ಹೋಗಿ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಹನುಮೇಶ ನಾಯಕ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದ. ಅದರಂತೆ ಜ.11ರಂದು ರಾತ್ರಿ 7.30ರ ಸುಮಾರಿಗೆ ಯಲ್ಲಾಲಿಂಗನನ್ನು ಕೊಲೆ ಮಾಡಲಾಗಿತ್ತು.