ಚನ್ನಪಟ್ಟಣದ ಗೊಂಬೆ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಬಹುಮಾನ
ಬೆಂಗಳೂರು, ಜ.30 : ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಕುರಿತ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ. ಮಹಾರಾಷ್ಟ್ರಕ್ಕೆ ಮೊದಲ ಮತ್ತು ಛತ್ತೀಸ್ಗಢ ರಾಜ್ಯಕ್ಕೆ ಎರಡನೇ ಬಹುಮಾನ ಸಿಕ್ಕಿದೆ.
ಜನವರಿ
31ರಂದು
ನಡೆಯುವ
ಸಮಾರಂಭದಲ್ಲಿ
ಕೇಂದ್ರ
ರಕ್ಷಣಾ
ಸಚಿವ
ಮನೋಹರ
ಪರಿಕ್ಕರ್
ಅವರು
ಬಹುಮಾನಗಳನ್ನು
ವಿತರಣೆ
ಮಾಡಲಿದ್ದಾರೆ.
ಚನ್ನಪಟ್ಟಣದ
ಸ್ತಬ್ಧಚಿತ್ರದಲ್ಲಿ
4ರಿಂದ
10
ಅಡಿಗಳ
ಎತ್ತರದ
ಒಟ್ಟು
42
ಬೊಂಬೆಗಳು
ಮತ್ತು
ಆಟಿಕೆಗಳನ್ನು
ಅಳವಡಿಸಲಾಗಿತ್ತು.
4
ಬೊಂಬೆಗಳು
ಬ್ಯಾಟರಿ
ನೆರವಿನಿಂದ
ತಿರುಗುತ್ತಿದ್ದವು.
[ಗಣರಾಜ್ಯೋತ್ಸವ
:
ಕರ್ನಾಟಕದ
ಸ್ತಬ್ಧಚಿತ್ರ
ನೋಡಿ]
ಮಹಾರಾಷ್ಟ್ರ ರಾಜ್ಯ ನಿರ್ಮಿಸಿದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಫಂಡರಾಪುರದ ಯಾತ್ರೆ ಕುರಿತು ಸ್ತಬ್ಧ ಚಿತ್ರಕ್ಕೆ ಮೊದಲ ಬಹುಮಾನ ಮತ್ತು ಛತ್ತೀಸ್ಗಢ ರಾಜ್ಯದ ಮಾಲೂತಿ ದೇವಸ್ಥಾನಗಳ ಕುರಿತ ಸ್ತಬ್ಧಚಿತ್ರಕ್ಕೆ ಎರಡನೆಯ ಬಹುಮಾನ ದೊರೆತಿದೆ. [ಚಿತ್ರಗಳಲ್ಲಿ ನೋಡಿ : ಒಬಾಮಾ ಭಾರತ ಭೇಟಿ ಮೊದಲ ದಿನ]
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳೂ ಸೇರಿದಂತೆ ಒಟ್ಟು 25 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಅವರು ಈ ಸ್ತಬ್ಧ ಚಿತ್ರವನ್ನು ಸಿದ್ಧಪಡಿಸಿದ್ದರು. [ಗಣತಂತ್ರ ದಿನ ಸಂಭ್ರಮದಲ್ಲಿ ಒಬಾಮಾ, ಮೋದಿ]
ಚನ್ನಪಟ್ಟಣದ
ಬೊಂಬೆಗಳ
ಸ್ತಬ್ಧ
ಚಿತ್ರ
ಮಕ್ಕಳ
ಲೋಕವನ್ನು
ಪ್ರತಿಬಿಂಬಿಸಿತ್ತು.
42
ಬೊಂಬೆ
ಹಾಗೂ
ಆಟಿಕೆಗಳು
ಈ
ಸ್ತಬ್ಧದ
ಜೊತೆಗೆ
ಕನ್ನಡದ
ಜನಪ್ರಿಯ
ಶಿಶುಗೀತೆ
'ಆನೆ
ಬಂತೊಂದಾನೆ'
ಗೀತೆಯ
ಸಾಲುಗಳ
ಸಂಗೀತವೂ
ಬಿತ್ತರಗೊಂಡಿತ್ತು.
ಖ್ಯಾತ
ಸಂಗೀತ
ನಿರ್ದೇಶಕ
ಪ್ರವೀಣ್
ರಾವ್
ಅವರು
ಈ
ಸಂಗೀತ
ಸಂಯೋಜನೆ
ಮಾಡಿದ್ದರು.
ಅಂದಾಗೆ 2014ರಲ್ಲಿ ಕರ್ನಾಟಕದ ಟಿಪ್ಪು ಸುಲ್ತಾನ್ ಕುರಿತ ಸ್ತಬ್ಧಚಿತ್ರ, 2013ರಲ್ಲಿ ಕಿನ್ನಾಳ ಕಲೆಯ ಸ್ತಬ್ಧಚಿತ್ರ, 2012ರಲ್ಲಿ ದಕ್ಷಿಣ ಕನ್ನಡದ ಭೂತಾರಾಧನೆಯ ಸ್ತಬ್ಧಚಿತ್ರ ಗಣರಾಜ್ಯೋತ್ಸವದ ಪರೇಡ್ನಲ್ಲಿ ಪಾಲ್ಗೊಂಡಿದ್ದವು.